ಮಡಿಕೇರಿ, ಡಿ. 19: ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಗಳೂರಿನ ವಕ್ಕಲಿಗರ ಯಾನೆ ಗೌಡ ಸಂಘದ ವತಿಯಿಂದ ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಸಿಲುಕಿ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡ ಮದೆಗ್ರಾಮ, ಜೋಡುಪಾಲ, ಎರಡನೇ ಮೊಣ್ಣಂಗೇರಿ, ಕಾಂಡನಕೊಲ್ಲಿ ಮತ್ತು ಕಾಲೂರು ಗ್ರಾಮದ ಕೆಲವು ಆಯ್ದ ಸಂತ್ರಸ್ತರಿಗೆ ಪರಿಹಾರದ ಹಣವನ್ನು ವಿತರಿಸಲಾಯಿತು.

ಈ ಸಂದರ್ಭ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್, ಕೊಡಗು ಗೌಡ ಫೆಡರೇಶನ್ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ನಗರಸಭೆ ಅಧ್ಯಕ್ಷೆ ಕೂಡಕಂಡಿ ಸೋಮಣ್ಣ, ಗೌಡ ಸಮಾಜದ ಖಜಾಂಚಿ ಕುಯ್ಯಮುಡಿ ವಸಂತ, ನಿರ್ದೇಶಕರುಗಳಾದ ದಂಬೆಕೋಡಿ ಆನಂದ, ಪೊನ್ನಚನ ಮಧುಸೂದನ್, ಕೋಳುಮುಡಿಯನ ಅನಂತ್‍ಕುಮಾರ್, ಉಳುವಾರನ ಅಮೃತ ಸುರೇಶ್, ಹುದೇರಿ ರಾಜೇಂದ್ರ, ಕುಂಜಿಲನ ರಾಮಯ್ಯ, ವ್ಯವಸ್ಥಾಪಕ ಬೊಳ್ತಜಿ ಅಶೋಕ್ ಹಾಗೂ ಮಂಗಳೂರಿನ ವಕ್ಕಲಿಗರ ಯಾನೆ ಗೌಡ ಸಂಘದ ಅಧ್ಯಕ್ಷ ಉಳುವಾರು ಸುಕುಮಾರಗೌಡ, ಉಪಾಧ್ಯಕ್ಷ ನೆರಿಯನ ಆನಂದಗೌಡ, ಕಾರ್ಯದರ್ಶಿ ದೇರಾಜೆ ಸದಾನಂದ ಗೌಡ, ಖಜಾಂಚಿ ನಿನ್ನಿಕಲ್ಲು ಶಿವರಾಮ ಗೌಡ ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಹಾಜರಿದ್ದರು.

ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಿಸುವಲ್ಲಿ ಮಡಿಕೇರಿಯ ವಕೀಲರಾದ ಮೊಂಟಡ್ಕ ಅರುಣ್ ಕುಮಾರ್ ಶ್ರಮ ವಹಿಸಿದ್ದರು.