ಸುಂಟಿಕೊಪ್ಪ, ಡಿ.19 : ಮೂರ್ಯಾಡ್ ದಾರುಲ್ ಹಿದಾಯ ದರ್ಸ್ ನ 44ನೇ ವಾರ್ಷಿಕ ಪ್ರಚಾರ ಸಮ್ಮೇಳನ ಹಾಗೂ ದಿಕ್ರಾ ದುಆ ಮಜ್ಲಿಸ್ ಇಲ್ಲಿನ ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಙ್ಜಳ್ ಶರೀಹತ್ ಕಾಲೇಜು ಆವರಣದಲ್ಲಿ ನಡೆಯಿತು.
ಸಮಾರಂಭವನ್ನು ಉದ್ದೇಶಿಸಿ ಎಸ್.ವೈ.ಎಸ್ ನ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಸ್ಸಮದ್ ಪೂಕೋಟೂರು ಮಾತನಾಡಿ, ಭಾರತದ ಸಂವಿಧಾನ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಇಸ್ಲಾಮಿನ ಪವಿತ್ರವಾದ ಶರೀಯತ್ ನಿಯಮ ಸಾರ್ವತ್ರಿಕವೂ, ಸಮಾನತೆಯೂ ಸರ್ವರಿಗೂ ಸ್ವಾತಂತ್ರ್ಯವನ್ನು ನೀಡುವಂತದ್ದಾಗಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಎಂ.ಅಬ್ದುಲ್ಲ ಫೈಝಿ ಎಡಪಾಲ ನೆರವೇರಿಸಿದರು. ಅಧ್ಯಕ್ಷತೆಯನ್ನು ಡಿಒಎಸ್ಒ ಕೇಂದ್ರ ಸಮಿತಿಯ ಅಧ್ಯಕ್ಷ ಎಂ.ಉಮ್ಮರ್ ಮುಸ್ಲಿಯಾರ್ ಕೀಶ್ಯೆರಿ ವಹಿಸಿದ್ದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಡಿಒಎಸ್ಓ ನ ಅಧ್ಯಕ್ಷ ಎ.ಸಿ.ಉಸ್ಮಾನ್ ಫೈಝಿ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಎಸ್.ಎಂ.ಎಸ್ ಕಾಲೇಜಿನ ಪ್ರಾಚಾರ್ಯ ಝೈನುದ್ದೀನ್ ಫೈಝಿ, ಸಮಸ್ತ ಮ್ಯಾನೇಜ್ಮೆಂಟ್ ಅಸೋಶಿಯೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಉಸ್ಮಾನ್ ಹಾಜಿ ಸಿದ್ದಾಪುರ, ಸುನ್ನಿ ಶಾಫಿ ಜಮಾ ಮಸೀದಿ ಅಧ್ಯಕ್ಷ ಹಸನ್ ಕುಂಜ್ಞಿ, ಸುನ್ನಿ ಶಾಫಿ ಜಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಸೂಫಿ ಸಾಹಿಬ್, ಖಜಾಂಚಿ ಎಸ್.ಎಂ.ಮುಹಮ್ಮದ್ ಸಾಹಿಬ್, ಸಿ.ಎಂ.ಹಮೀದ್ ಮೌಲವಿ ಇತರರು ಇದ್ದರು.