ಶ್ರೀಮಂಗಲ, ಡಿ. 11: ಕೊಡವ ಸಂಸ್ಕøತಿಯಲ್ಲಿ ಮಂದ್‍ಗೆ ಮಹತ್ವದ ಸ್ಥಾನಮಾನವಿದೆ. ಮಂದ್ ಕೊಡವ ಸಂಸೃತಿಯ ಬೇರಾಗಿದ್ದು, ಮಂದ್ ಗಳನ್ನು ಒತ್ತುವರಿ ಮಾಡಿಕೊಂಡು ಮಂದ್‍ನ ಅಸ್ಥಿತ್ವವನ್ನು ಇಲ್ಲದಾಗಿಸುವ ಮೂಲಕ ಮಂದ್ ಚಟುವಟಿಕೆಯನ್ನು ಸ್ಥಗಿತಗೊಳಿ ಸುವದರಿಂದ ಕೊಡವ ಸಂಸೃತಿಯ ಬೆಳವಣಿಗೆಗೆ ಧಕ್ಕೆಯಾಗಲಿದೆ. ಆದ್ದರಿಂದ ಮಂದ್‍ಗಳನ್ನು ಒತ್ತುವರಿ ಮಾಡಿಕೊಂಡಿರುವವರು ಇದನ್ನು ಅರಿತು ಸ್ವಯಂ ಪ್ರೇರಿತರಾಗಿ ಒತ್ತುವರಿ ಮಾಡಿಕೊಂಡಿರುವ ಜಾಗಗಳನ್ನು ಬಿಟ್ಟು ಸಹಕಾರ ನೀಡಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಹೇಳಿದರು.

ಅವರು ಬಲ್ಯಮುಂಡೂರು ಗ್ರಾ.ಪಂ. ವ್ಯಾಪ್ತಿಯ ತೂಚಮಕೇರಿ ಗ್ರಾಮದಲ್ಲಿ ಕಳೆದ 15 ವರ್ಷದಿಂದ ಮುಚ್ಚಿಹೋಗಿದ್ದ ಪೊಲೆಮಲೆಕೇರಿ ಮಂದ್‍ನ್ನು ಕೊಡವ ಸಾಹಿತ್ಯ ಅಕಾಡೆಮಿ ಮತ್ತು ತೂಚಮಕೇರಿ ಪುತ್ತರಿ ಕೋಲಾಟ ಸಮಿತಿ, ತಕ್ಕ ಮುಖ್ಯಸ್ಥರ ಆಶ್ರಯದಲ್ಲಿ ಪುನರಾರಂಭಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಪುತ್ತರಿ ಕೋಲಾಟ ಸಮಿತಿಯ ಅಧ್ಯಕ್ಷ ಮೂಕಳಮಾಡ ಅರಸು ನಂಜಪ್ಪ ಅವರು ತುಂಬಾ ಪುರಾತನ ಹಾಗೂ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಈ ಮಂದ್ ಕಾರಣಾಂತರದಿಂದ 2001 ರಿಂದ ನಿಂತು ಹೋಗಿತ್ತು. ಇದೀಗ ಮಂದ್ ತೆರೆದಿರುವದು ಸಂತೋಷ. ಭಾಷೆ ಸಂಸೃತಿ ಉಳಿದರೆ ಮಾತ್ರ ಒಂದು ಜನಾಂಗ ಉಳಿಯಲು ಸಾಧ್ಯವಿದೆ. ಮಂದ್‍ನಲ್ಲಿ ಪ್ರತೀ ವರ್ಷ ಕಲಿಯಲು ಇರುತ್ತದೆ. ಹಿಂದಿನ ಕಾಲದಲ್ಲಿ ಮಂದ್ ನ್ಯಾಯಾಲಯ ದಂತೆ ವಿವಾದಗಳನ್ನು ಇತ್ಯರ್ಥ ಪಡಿಸುವ ಕೇಂದ್ರವಾಗಿತ್ತು ಎಂದು ನೆನಪಿಸಿದರು. ಮತ್ತೋರ್ವ ಮುಖ್ಯ ಅತಿಥಿ ಸರ್ವೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಅಜ್ಜಿಕುಟ್ಟೀರ ಬಿ. ಭೀಮಯ್ಯ ಮಾತನಾಡಿ, ಪೊಲೆಮಲೆಕೇರಿ ಊರ್ ಮಂದ್ ಆಗಿದ್ದು, ಈ ವ್ಯಾಪ್ತಿಗೆ ಬರುವ ಗುದ್ದ್‍ರ್‍ವಡೆ ನಾಡ್ ಮಂದ್ ಆಗಿದ್ದು, ಐದು ಗ್ರಾಮಗಳು ಸೇರಿ ಇಲ್ಲಿ ಮಂದ್ ನಡೆಸಲಾಗುತ್ತಿತ್ತು. ಆದರೆ 1954 ರಿಂದ ಈ ಮಂದ್ ಮುಚ್ಚಿಹೋಗಿದ್ದು, ಮಂದ್ ತೆರೆಯಲು ಬಹಳಷ್ಟು ಪ್ರಯತ್ನ ಪಟ್ಟರೂ ಸಾದ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಮಂದ್ ತೆರೆಯಲು ಈ ಭಾಗದ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.

ಕೊಡವ ಜಾನಪದ ತಜ್ಞ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ ಇಂದು ತೆರೆದ ಮಂದ್ ಮುಂದೆ ಎಂದೂ ಮುಚ್ಚದಂತೆ ಶಾಶ್ವತವಾಗಿ ನಡೆಸಿಕೊಂಡು ಹೋಗುವದು ಗ್ರಾಮಸ್ಥರ ಜವಾಬ್ದಾರಿ ಯಾಗಿದೆ.

ಮಕ್ಕಳನ್ನು ಮಂದ್‍ಗೆ ಕರೆತರುವದು ಹಾಗೂ ಮಕ್ಕಳೊಂದಿಗೆ ಹಬ್ಬಗಳನ್ನು ಆಚರಿಸುವ ಮೂಲಕ ಕೊಡವ ಸಂಸ್ಕøತಿಯ ಮಹತ್ವ ಹಾಗೂ ಅಭಿಮಾನವನ್ನು ಮಕ್ಕಳಲ್ಲಿ ತುಂಬುವ ಕೆಲಸ ಪೋಷಕರು ಮಾಡ ಬೇಕೆಂದು ಹೇಳಿದರು. ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಮಾತನಾಡಿ ಕೊಡಗಿನಲ್ಲಿ ಸುಮಾರು ಮಂದ್‍ಗಳ ಜಾಗ ಒತ್ತುವರಿಯಾಗಿದೆ. ಇದಕ್ಕೆ ಗ್ರಾಮಸ್ಥರಲ್ಲಿ ಮಂದ್‍ಗಳ ಮೇಲೆ ಪ್ರೀತಿ, ನಮ್ಮ ಸಂಸ್ಕøತಿಯ ಮೇಲೆ ಅಭಿಮಾನ ಇಲ್ಲದಿರುವದೇ ಕಾರಣವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಂದ್‍ಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿದ್ದು, ಅವುಗಳು ತಮ್ಮ ಗತವೈಭವವನ್ನು ಮರುಕಳಿಸಲಿ ಎಂದು ನುಡಿದರು. ಪೆಮ್ಮಂಡ ಪುಷ್ಪ ಪ್ರಾರ್ಥಿಸಿ ಕಾರ್ಯಕ್ರಮದ ಸಂಚಾಲಕ ಚಂಗುಲಂಡ ಸೂರಜ್ ಸ್ವಾಗತಿಸಿ ಆಂಗೀರ ಕುಸುಮ ನಿರೂಪಿಸಿ, ಬೊಳ್ಳಜೀರ ಅಯ್ಯಪ್ಪ ವಂದಿಸಿದರು.

ಸಾಂಸ್ಕøತಿಕ ಕಾರ್ಯಕ್ರಮ: ಪೊಲೆಮಲೆಕೇರಿ ಮಂದ್ ಪುನರಾರಂಭ ಕಾರ್ಯಕ್ರಮದ ಸಂದರ್ಭ ಮಂದ್‍ನಲ್ಲಿ ವಿವಿಧ ಕೊಡವ ಜಾನಪದ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಪೊನ್ನಂಪೇಟೆ ಕೊಡವ ಸಮಾಜ ದಿಂದ ಉಮ್ಮತ್ತಾಟ್, ಪುತ್ತರಿ ಕೋಲಾಟ್, ತೂಚಮಕೇರಿ, ಪೊಲೆಮಲೆಕೇರಿ ಮಂದ್‍ನಿಂದ ಉಮ್ಮತ್ತಾಟ್, ಪುತ್ತರಿ ಕೋಲಾಟ್, ಹುದಿಕೇರಿ ಮಹಾದೇವ ಸಂಘದಿಂದ ಕತ್ತಿಯಾಟ್, ಹೈಸೊಡ್ಲೂರು ಪೊಯ್ಯಡ ಮಂದ್ ತಂಡದಿಂದ ಪುತ್ತರಿ ಕೋಲಾಟ್, ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದಿಂದ ಉಮ್ಮತ್ತಾಟ್, ಬೆಕ್ಕೆಸೊಡ್ಲೂರು ಮಂದತವ್ವ ತಂಡದಿಂದ ಪುತ್ತರಿ ಕೋಲಾಟ್, ತಾಳಿಪಾಟ್, ಪರೆಯಕಳಿ ಪ್ರದರ್ಶನ ಜನಮನ ಸೆಳೆಯಿತು.

ಸಾಧಕರಿಗೆ ಸನ್ಮಾನ: ಕೊಡವ ಸಂಸ್ಕøತಿ ಹಾಗೂ ಜಾನಪದ ಕಲೆ ಬೆಳವಣಿಗೆಗೆ ಶ್ರಮಿಸಿದ ಸಾಧಕರಿಗೆ ಈ ಸಂದರ್ಭ ಸನ್ಮಾನ ಮಾಡ ಲಾಯಿತು. ಅಜ್ಜಿಕುಟ್ಟೀರ ಬಿ. ಭೀಮಯ್ಯ, ಕಾಳಿಮಾಡ ಮೋಟಯ್ಯ, ಪೆಮ್ಮಂಡ ಅಯ್ಯಪ್ಪ, ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಅವರನ್ನು ಗ್ರಾಮಸ್ಥರು-ಅಕಾಡೆಮಿಯಿಂದ ಸನ್ಮಾನಿಸ ಲಾಯಿತು. ಗ್ರಾಮಸ್ಥರು ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಕಾರ್ಯಕ್ರಮದ ಸಂಚಾಲಕ ಚಂಗುಲಂಡ ಸೂರಜ್ ಅವರನ್ನು ಸನ್ಮಾನಿಸಿದರು.

ಮಕ್ಕಳನ್ನು ಮಂದ್‍ಗೆ ಕಾಲಿರಿಸುವ ಸಾಂಪ್ರದಾಯಿಕ ಪದ್ದತಿ: ಒಂದುವರೆ ದಶಕಕ್ಕೂ ಹೆಚ್ಚು ಕಾಲÀದಿಂದ ಮುಚ್ಚಿ ಹೋಗಿದ್ದ ಮಂದ್‍ನಲ್ಲಿ ಪುತ್ತರಿ ಮಂದ್ ಸಂದರ್ಭ ಚಿಕ್ಕ ಮಕ್ಕಳಿಗೆ ಧೈರ್ಯ ಹಾಗೂ ಸ್ಥೈರ್ಯ ತುಂಬಲಿ ಎಂದು ಮಂದ್ ಜಾಗಕ್ಕೆ ಕಾಲಿರಿಸುವ (ಮಂದ್ ಮೊಟ್ಟುವೊ) ಸಾಂಪ್ರ ದಾಯಿಕ ಪದ್ಧತಿಯನ್ನು ನಡೆಸಲಾಯಿತು.

ಕೋಲು ಹಾಗೂ ದುಡಿ ವಿತರಣೆ: ಕೊಡವ ಸಾಹಿತ್ಯ ಅಕಾಡೆಮಿಯಿಂದ ಪ್ರಸಕ್ತ ವರ್ಷ ಪುನರಾರಂಭ ಗೊಂಡಿರುವ ಪಯ್ಯಡ, ಹಾಗೂ ಪೊಲೆಮಲೆಕೇರಿ ಮಂದ್ ಮುಖ್ಯಸ್ಥರಿಗೆ ಪುತ್ತರಿ ಕೋಲಾಟದ ಕೋಲ್ ಹಾಗೂ ದುಡಿ ವಿತರಿಸ ಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ತೂಚಮಕೇರಿ ಪುತ್ತರಿ ತಕ್ಕ ಪೆಮ್ಮಂಡ ಸಿ. ನಾಣಯ್ಯ, ಸಾಂಸ್ಕøತಿಕ ಕಾರ್ಯಕ್ರಮ ಪೈಪೋಟಿಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಮಾಜಸೇವಕ ಪೆಮ್ಮಂಡ ಬಿ. ಅಯ್ಯಪ್ಪ, ಮಹಾದೇವ ದೇವಸ್ಥಾನ ಭಂಡಾರ ತಕ್ಕ ಕುಲ್ಲಚೀರ ಮೊಣ್ಣಪ್ಪ, ದೇವತಕ್ಕ ಮೂಕಳಮಾಡ ಅಪ್ಪಾಜಿ ಹಾಜರಿದ್ದರು.