ನಾಪೋಕ್ಲು, ಡಿ. 12: ಕೊಡಗಿನ ವಿದ್ಯಾರ್ಥಿಯೊಬ್ಬ ಸುಳ್ಯದ ಪಯಸ್ವಿನಿ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ದುರ್ಮರಣ ಹೊಂದಿದ ಘಟನೆ ನಡೆದಿದೆ. ಸುಳ್ಯದ ಖಾಸಗಿ ತರಬೇತಿ ಕೇಂದ್ರವೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕಕ್ಕಬ್ಬೆ - ಮರಂದೋಡ ಗ್ರಾಮದ ಸುದೀಪ್ (18) ಎಂಬವರೇ ಸಾವನ್ನಪ್ಪಿದÀ ವಿದ್ಯಾರ್ಥಿ. ತಾ10 ರಂದು ಮೊಬೈಲ್ ರಿಪೇರಿಗೆಂದು ತೆರಳಿದ ಸುದೀಪ್ ಸಂಜೆಯಾದರೂ ಹಾಸ್ಟೆಲ್‍ಗೆ ಬಾರದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿತ್ತು.

ಈ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ನಿನ್ನೆ ಸುಳ್ಯ ಸಮೀಪದ ಪಯಸ್ವಿನಿ ನದಿಯಲ್ಲಿ ಮೃತ ದೇಹ ಪತ್ತೆಯಾಯಿತು. ಈಜಲು ತೆರಳಿದ್ದ ಸುದೀಪ್ ಆಕಸ್ಮಿಕವಾಗಿ ಮೃತಪಟ್ಟ ಬಗ್ಗೆ ಶಂಕಿಸಲಾಗಿದೆ. ಸಿಐ ಸತೀಶ್, ಠಾಣಾಧಿಕಾರಿ ಮಂಜುನಾಥ್ ಕಾನೂನು ಕ್ರಮಕೈಗೊಂಡು ಸುದೀಪ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ದರು. ಸುದೀಪ್ ಮರಂದೋಡ ಗ್ರಾಮದ ಚಂಡೀರ ಸುಂದರ (ಸುರೇಶ) ಪತ್ನಿ ಮೀನಾಕ್ಷಿ ದಂಪತಿಗಳ ಪುತ್ರನಾಗಿದ್ದಾನೆ.