ಮಡಿಕೇರಿ, ನ. 22: ಮೂರ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪೊನ್ನು ಮುತ್ತಪ್ಪ ಅವರನ್ನು ಆಯ್ಕೆ ಮಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರುರವೀಂದ್ರ ಆದೇಶ ಪತ್ರ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ಮಾತನಾಡಿದರು. ನಿರ್ಗಮಿತ ಅಧ್ಯಕ್ಷ ಮುಂಡಂಡ ಭಾಗೇಶ್ ಅವರನ್ನು ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೊಟ್ಟಮುಡಿ ಹಂಸ, ಗ್ರಾ.ಪಂ ಸದಸ್ಯರಾದ ಮೀನಾಕ್ಷಿ ಕೇಶವ, ಈರಸುಬ್ಬ, ನಂದಕುಮಾರ್, ರಾಣಿ, ಮಹಮ್ಮದ್ ಆಲಿ, ಧನಂಜಯ, ಶಿವ ಕುಮಾರ್, ಸಮೀರ್, ಅಬ್ಬುಬಕರ್, ಜಿ.ಪಂ ಪರಾಜಿತ ಅಭ್ಯರ್ಥಿ ಭಾರತಿ ಅಣ್ಣು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ವಲಯ ಅಧ್ಯಕ್ಷ ಸೈಫ್ಆಲಿ ಕಾರ್ಯಕ್ರಮ ನಿರೂಪಿಸಿದರು.