ಮಡಿಕೇರಿ, ನ. 22: ಬೆಂಗಳೂರಿನ ಕೆ.ಪಿ. ರೋಡ್ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ಸಂತ್ರಸ್ತರಾದ 10 ಕುಟುಂಬಗಳಿಗೆ ತಲಾ ರೂ. 10 ಸಾವಿರದಂತೆ ರೂ. 1 ಲಕ್ಷಗಳನ್ನು ವಿತರಿಸಲಾಯಿತು.
ಮಕ್ಕಂದೂರು ಗ್ರಾಮದ ಕೆ.ಎಸ್. ಕವಿತಾ, ಮದೆ ಗ್ರಾಮದ ಕೆ.ಆರ್. ರಾಜು, ಮಕ್ಕಂದೂರಿನ ಕಮಲಾಕ್ಷಿ, ಕೆ.ಕೆ. ಕುಶಾಲಪ್ಪ, ಎಸ್.ಯು. ವಿಜಯಕುಮಾರ್, ಮಡಿಕೇರಿಯ ಮಂಜುನಾಯಕ್, ಎರಡನೇ ಮೊಣ್ಣಂಗೇರಿಯ ಧನಂಜಯ್, ಎ.ಕೆ. ದೇವಯ್ಯ, ಎಂ.ಎಂ. ಜತ್ತಪ್ಪ, ಕೆ.ಎನ್. ರಾಜೇಶ್ ಅವರಿಗೆ ತಲಾ ರೂ. 10 ಸಾವಿರಗಳನ್ನು ನೀಡಲಾಯಿತು.
ಬೆಂಗಳೂರಿನ ಕೆ.ಪಿ. ರೋಡ್ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾರ್ಯಕಾರಿ ಸಮಿತಿ ಸದಸ್ಯರು, ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ, ಅಂಬೆಕಲ್ ಕುಶಾಲಪ್ಪ ಈ ಸಂದರ್ಭ ಹಾಜರಿದ್ದರು.