ಸಿದ್ದಾಪುರ, ನ. 22: ಅಕ್ರಮವಾಗಿ ಬೀಟೆ ಮರಗಳ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆನೆಕಾಡು ಶಾಖಾ ಸಿಬ್ಬಂದಿಗಳು ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಅರಣ್ಯ ಇಲಾಖೆಯ ವಾಹನವನ್ನು ಕಂಡು ತಕ್ಷಣ ವೇಗವನ್ನು ಹೆಚ್ಚಿಸಿದೆ. ಇದರಿಂದ ಅನುಮಾನಗೊಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಡಿಕೇರಿ-ಮೈಸೂರು ಮುಖ್ಯ ರಸ್ತೆಯ ಆನೆಕಾಡಿನಿಂದ ಹಿಂಬಾಲಿಸಿಕೊಂಡು ಬಂದು ಬಸವನಹಳ್ಳಿ ಸಮೀಪ ಅಪರಿಚಿತ ವಾಹನವನ್ನು ತಡೆದು ನಿಲ್ಲಿ ಪರಿಶೀಲಿಸುವಾಗ ಬೀಟೆ ಮರಗಳ ನಾಟಾಗಳು ಇರುವದು ಕಂಡು ಬಂದಿದೆ. ವಾಹನ (ಕೆ.ಎ. 12-ಪಿ.2280)ರಲ್ಲಿ ಯಾವದೇ ರಹದಾರಿ ಇಲ್ಲದೇ ಬೀಟೆ ಮರಗಳ ನಾಟಾಗಳನ್ನು ಸಾಗಾಟ ಮಡುತ್ತಿರುವದನ್ನು ಅರಣ್ಯ ಸಿಬ್ಬಂದಿಗಳು ಪತ್ತೆ ಹಚ್ಚಿ ಮೊಕ್ಕದಮೆ ಯನ್ನು ದಾಖಲಿಸಿಕೊಂಡಿದ್ದಾರೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಸುಂಟಿಕೊಪ್ಪದ ಗದ್ದೆಹಳ್ಳ ನಿವಾಸಿ ಮಣಿಕಂಠ (32) ಎಂಬಾತನನ್ನು ಬಂಧಿಸಿ ನ್ಯಾಯಾಲ ಯಕ್ಕೆ ಹಾಜರು ಪಡಿಸಲಾಗಿದೆ. ಪರಾರಿಯಾದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಲೆ ಬೀಸಿದ್ದಾರೆ. ತನಿಖೆ ಮುಂದುವರೆ ಯುತ್ತಿದ್ದು,

(ಮೊದಲ ಪುಟದಿಂದ) ಕಳ್ಳತನ ಮಾಡಿದ ಮಾಲು ಹಾಗೂ ವಾಹನದ ಅಂದಾಜು ಮೌಲ್ಯ ರೂ. 12 ಲಕ್ಷ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಸಿ.ಆರ್. ಅರುಣ್ ಅವರ ಮಾರ್ಗದರ್ಶನದಲ್ಲಿ ಆನೆಕಾಡು ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೆ.ಪಿ. ರಂಜನ್, ಚಾಲಕ ಬಿ.ಆರ್. ಸತೀಶ್, ಆರ್.ಆರ್.ಟಿ ತಂಡದ ಸಿಬ್ಬಂದಿಗಳಾದ ಪೊನ್ನಪ್ಪ, ಶಾಂತ, ಸಂಜು ಇತರರು ಪಾಲ್ಗೊಂಡಿದ್ದರು.

ವರದಿ. ವಾಸು