ವೀರಾಜಪೇಟೆ, ನ. 20: ವೀರಾಜಪೇಟೆಯಲ್ಲಿ ವಿಶೇಷ ರೀತಿಯಲ್ಲಿ ಪ್ರಸಿದ್ಧ ಚಿತ್ರ ಕಲಾವಿದರಿಂದ ಕಾಗದ ಮತ್ತು ಬಟ್ಟೆ ಪರದೆಯ ಮೇಲೆ ಚಿತ್ರಿತವಾದ ಚಿತ್ರಕಲೆಗಳು ಪ್ರದರ್ಶಿತವಾಗುತ್ತಿವೆ.
ಕೊಡಗು ಜಿಲ್ಲೆಯು ಕ್ರೀಡೆ, ಸಂಸ್ಕøತಿ, ಕೃಷಿ ಮತ್ತು ಪ್ರವಾಸೋದ್ಯ ಮಕ್ಕೆ ಹೆಸರುವಾಸಿಯಾಗಿದೆ ಅದರಂತೆ ಎಲೆಯ ಮರೆಯ ಕಾಯಿಯಂತೆ ಚಿತ್ರಕಲೆಯು ಒಂದು ಭಾಗವಾಗಿ ಇಂದು ಅನೇಕ ಹೆಸರುವಾಸಿ ಚಿತ್ರಕಲಾವಿದರನ್ನು ಪುಟ್ಟ ಜಿಲ್ಲೆಯು ಹುಟ್ಟುಹಾಕುತ್ತಿದೆ, ಈ ಹಿನ್ನೆಲೆಯಲ್ಲಿ ವೀರಾಜಪೇಟೆಯ ನಗರದ ನಿವಾಸಿ ಹಾಗೂ ಹವ್ಯಾಸಿ ಚಿತ್ರಕಲಾವಿದ ಸಾದಿಕ್ ಹಂಸ ಅವರ ಅವಿರತ ಶ್ರಮದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಸಾದಿಕ್ ಆರ್ಟ್ ಲಿಂಕ್ಸ್ ಸಂಯುಕ್ತ ಅಶ್ರಯದಲ್ಲಿ 5 ದಿನಗಳ ಕಲಾ ಶಿಬಿರ ಕಲಾ ಉತ್ಸವ ಕೊಡಗು 2018 ಎಂಬ ಕಾರ್ಯಕ್ರಮ ಪಟ್ಟಣದ ಎಸ್.ಎಸ್. ರಾಮಮೂರ್ತಿ ರಸ್ತೆಯಲ್ಲಿರುವ ಸಾದಿಕ್ ಆರ್ಟ್ ಕಲಾಭೂಮಿಯಲ್ಲಿ ನಡೆಯುತ್ತಿದ್ದು ಶಿಬಿರದಲ್ಲಿ ಸಾರ್ವಜನಿಕರು ಸೇರಿದಂತೆ ಶಾಲಾ ವಿಧ್ಯಾರ್ಥಿಗಳು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಚಿತ್ರಕಲೆಯ ಬಗ್ಗೆ ಕೊಡಗಿನ ಚಿತ್ರಕಲಾವಿದರ ಕುಂಚದಿಂದ ಅರಳಿದ ಚಿತ್ರಿತವಾದ ಚಿತ್ರಕಲೆಗಳ ಸ್ವಾದವನ್ನು ಪರಿಚಯಿಸಿಕೊಳ್ಳುತ್ತಿದ್ದಾರೆ.
ಕಲಾ ಶಿಬಿರವು ತಾ. 17ರಂದು ಅರಂಭವಾಗಿದ್ದು 21 ರಂದು (ಇಂದು) ಕೊನೆಗೊಳ್ಳುತ್ತಿದೆ. ಶಿಬಿರದಲಿ ಕೊಡಗಿನ ಹೆಸರಾಂತ ಚಿತ್ರಕಲಾವಿದರಾದ ಬಿ.ಅರ್. ಸತೀಶ್. ರೂಪೇಶ್ ನಾಣಯ್ಯ, ಪ್ರಸನ್ನ ಕುಮಾರ್, ರಾಮ್ ಗೌತಮ್, ಮತ್ತು ಪತ್ನಿ ಅರುಣ ಗೌತಮ್, ಬಾವ ಮಾಲ್ದಾರೆ, ಮತ್ತು ಚಿತ್ರಕಲಾ ಪರಿಷತ್ನ ವಿದ್ಯಾರ್ಥಿಯಾದ ಭುವನೇಶ್ವರಿ ಯೋಗಿಶ್ ಮೊದಲಾದವರ ಕುಂಚದಿಂದ ಚಿತ್ರಿತವಾದ ಚಿತ್ರಕಲೆಗಳು ಕಲಾ ಭೂಮಿಯಲ್ಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಮೊಗರಗಲ್ಲಿಯ ನಿವಾಸಿ ಎ.ಎ.ಹಂಸ ಅವರ ಪುತ್ರ ಹವ್ಯಾಸಿ ಚಿತ್ರಕಲಾವಿದರಾದ ಸಾಧಿಕ್ ಅವರು ಕೊಡಗಿನ ಹೆಸರಾಂತ ಚಿತ್ರಕಲಾವಿದರನ್ನು ಒಂದೇ ಸೂರಿನಡಿಯಲ್ಲಿ ಕರೆತಂದು ಚಿತ್ರಕಲೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಚಿತ್ರಕಲೆ ಪ್ರದರ್ಶನ, ಶಿಲ್ಪಕಲೆ, ಪ್ರತಿಷ್ಟಾಪನಾ ಕಲೆ, ಛಾಯ ಚಿತ್ರಕಲೆ ನಿರ್ಮಾಣ ಮತ್ತು ಪ್ರದರ್ಶನ ಹೀಗೆ ನಾನಾ ಚಿತ್ರ ಪ್ರಕಾರಗಳನ್ನು ಚಿತ್ರಕಲಾ ರಸಿಕರಿಗೆ ರಸದೌತಣ ಉಣಬಡಿಸುತ್ತಿದ್ದಾರೆ.
ಕಲಾ ಶಿಬಿರದಲ್ಲಿ ಕಲೆಯ ಬಗ್ಗೆ ವಿವರಿಸುತ್ತಾ ಪುತ್ತೂರಿನ ಪ್ರವೀಣ್ ವರ್ಣಕುಟೀರ ಅವರು ಇಂದು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವು ನಾಗಲೋಟದಲ್ಲಿ ಬೆಳೆಯತೊಡಗಿದೆ, ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಚಿತ್ರಕಲೆಯನ್ನು ಪರಿಚಯಿಸುವ ವೇದಿಕೆ ನೀಡಿದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಚಿತ್ರಕಲೆಗಾರರ ಚಿತ್ರಗಳ ಬಿಕರಿಯೊಂದಿಗೆ ಚಿತ್ರಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕೊಡಗಿನ ಬಹುಮುಖ ಕಲೆಗಳು ರಾಜ್ಯವಲ್ಲದೆ ದೇಶದಾದಂತ್ಯ ಪ್ರಖ್ಯಾತಿಗೊಳ್ಳಬೇಕು ಎಂದರು.
ಕಲಾವಿದ ರಾಮ್ ಗೌತಮ್ ಮಾಹಿತಿ ನೀಡುತ್ತಾ,ಕೊಡಗಿನಲ್ಲಿ ನಾನಾ ರೀತಿಯ ಚಿತ್ರ ಕಲಾವಿದರಿದ್ದಾರೆ, ಕುಂಚದಿಂದ ಚಿತ್ರಿತವಾದ ಚಿತ್ರಕಲೆಯನ್ನು ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸಿ ಸಾರ್ವಜನಿಕರಿಗೆ ಕಲೆಯ ಭಗ್ಗೆ ಆಸಕ್ತಿ ಬೆಳೆಸುವಂತೆ ಮಾಡಲು ಸರ್ಕಾರವು ಸ್ಥಳವಾಕಾಶ ನೀಡಿದಲ್ಲಿ ನಿರಂತವಾಗಿ ಕಲೆಯನ್ನು ಬೆಳೆಸಲು ಕಲಾವಿದರು ಒಂದೇ ಸೂರಿನಡಿಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮಾಡಬಹುದಾಗಿದೆ. ಕರ್ನಾಟಕ ರಾಜ್ಯದ ಬೃಹತ್ ನಗರಗಳಲ್ಲಿ ಚಿತ್ರಸಂತೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಚಿತ್ರಕಲೆ ಪ್ರದರ್ಶನ ಮತ್ತು ಮಾಹಿತಿ ಹಾಗೂ ಮಾರಾಟ ಮಾಡುವ ವೇದಿಕೆ ಕಲ್ಪಿಸಬೇಕು. ಅದರಂತೆ ಕೊಡಗಿನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ ಸ್ಥಳೀಯ ಚಿತ್ರ ಕಲಾವಿದರಿಗೆ ಪ್ರೋತ್ಸ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು. ಇವರೊಂದಿಗೆ ಇವರ ಪತ್ನಿ ಅರುಣಾ ಗೌತಮ್ ಅವರು ಚಿತ್ರಕಲೆಯ ಪರಿಣತಿಹೊಂದಿದ್ದು ಚಿತ್ರಕಲೆಯಲ್ಲಿ ಹೊಸ ಮೋಡಿ ಮಾಡುವ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಕಾಗದ ಹಾಳೆಯಲ್ಲಿ ಚಿತ್ರಕಲೆಯ ನೂತನ ಚಿತ್ರಗಳನ್ನು ಮಾಡುತ್ತಿದ್ದಾರೆ
ಇಂದು ಚಿತ್ರಕಲೆಯಲ್ಲಿ ಪೈಪೋಟಿ ಬೆಳದಿದೆ ಚಿತ್ರಕಲೆಯಲ್ಲಿ ಕಲಿಯುವಂತದ್ದು ಬಹಳವಿದೆ, ತಾನು ಕಲಿತ ವಿದೆÉ್ಯ ಪರರ ಮುಂದೆ ಪ್ರದರ್ಶನ ಮಾಡಿದಲ್ಲಿ ನಿಜವಾದ ಅರ್ಥ ಬರುತ್ತದೆ ಎಂದು ರವಿವರ್ಮ ದೃಶ್ಯ ಮಾಧ್ಯಮ ಮತ್ತು ಕಲಾ ಪರಿಷತ್ ಕಾಲೇಜಿನ ವಿದ್ಯಾರ್ಥಿ ಸುನದ್ ಹೇಳುತ್ತಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರಾದ ಬಿ.ಅರ್. ಸತೀಶ್: ಚಿತ್ರಕಲಾವಿದನು ತನ್ನ ಪರಿಸರ ಘಟನೆಗಳು ಮತ್ತು ಕಲ್ಪನೆಗಳ ಮೇಲೆ ವಿಷಯ ಆದರಿಸಿ ಚಿತ್ರ ರಚನೆ ಮಾಡತ್ತಾನೆ ಕ್ಲಿಷ್ಟವಾದ ಸಮಯವನ್ನು ದಾರ ಎಳೆದು ಪರದೆಯ ಮೇಲೆ ಚಿತ್ರ ರಚಿತವಾಗುತ್ತದೆ ಇಲ್ಲಿ ಭಾವನೆಗಳನ್ನು ಚಿತ್ರಗಳ ಮೂಲಕ ಹೇಳುವದಾಗಿದೆ. ಪರಿಣಾಮಕಾರಿ ಚಿತ್ರಗಳು ಕಲಾರಸಿಕರ ಮನದಲ್ಲಿ ನೆಲೆ ನಿಲ್ಲುತ್ತದೆ. ಶ್ರೀ ಸಾಮಾನ್ಯನಾದ ಕಲಾವಿದರುಗಳಿಗೆ ಸರ್ಕಾರವು ಚಿತ್ರಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರೋತ್ಸಾಹ ಧನ ಸಹಾಯ ಒದಗಿಸಿಕೊಟ್ಟಲ್ಲಿ ಕಲಾವಿದನ ಜೀವನ ನಿರ್ವಹಣೆಗೆ ಸಹಾಯ ಮಾಡಿದಂತಾಗುತ್ತದೆ.
ಚಿತ್ರಕಲಾ ಪರಿಷತ್ನ ವಿದ್ಯಾರ್ಥಿ ಗಳು ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊಂಡು ಮಾತನಾಡುತ್ತಾ, ಚಿತ್ರಕಲೆಯ ಶಿಕ್ಷಣದಲ್ಲಿ ಹಲವಾರು ವಿಷಯಾಧಾರಿತ ಪದವಿಗಳಿದ್ದು ಆಯ್ಕೆಯು ವಿದ್ಯಾರ್ಥಿಯ ವಿವೇಚನೆಗೆ ಬಿಟ್ಟಿದ್ದು, ಸಾಮಾಜಿಕ ಕಳಕಳಿಯ ಚಿತ್ರಣವನ್ನು ಚಿತ್ರಗಳ ಮೂಲಕ ನಾಡಿನ ಸಮಸ್ತ ಸಾರ್ವಜನಿಕರಿಗೆ ತಿಳಿಯಪಡಿಸುವ ಉದ್ದೇಶವಿದೆ, ಚಿತ್ರಕಲೆಯ ಶಿಕ್ಷಣದಲ್ಲಿ ವಿದ್ಯಾರ್ಥಿ ಗಳಿಗೆ ವಿಫುಲ ಅವಕಾಶಗಳಿವೆ, ಜಿಲ್ಲೆಯ ವಿದ್ಯಾರ್ಥಿಗಳು ಚಿತ್ರಕಲೆ ಯನ್ನು ಆಯ್ಕೆ ಮಾಡಿಕೊಂಡಲ್ಲಿ ಕಲೆಗೆ ಹೊಸ ಅಧ್ಯಾಯ ತೋರಿಸಿ ಕೊಟ್ಟಂತಾಗುತ್ತದೆ ಎನ್ನುತ್ತಾರೆ.
ಸಾಧಿಕ್ ಅವರು 2017 ರಿಂದ ಇಲಾಖೆ ಮತ್ತು ದಾನಿಗಳ ನೆರವಿನಿಂದ ಚಿತ್ರಕಲೆ ಪ್ರದರ್ಶನ ಕೂಕ್ಲೂರುವಿನಲ್ಲಿ ಆಯೋಜನೆ ಮಾಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂತರ್ ರಾಷ್ಟ್ರೀಯ ಚಿತ್ರಕಲಾವಿದರಾದ ಜ್ಯೋತಿಲಾಲ್ ಕೊಲ್ಲಂ ಮತ್ತು ರಾಜಪ್ಪನ್ ಆಚಾರಿ ಚೆಂಗನಶೇರಿ ಇವರುಗಳು 15 ದಿನಗಳ ಕಲಾ ಉತ್ಸವದಲ್ಲಿ ಭಾಗಿಯಾಗಿ ಅಪೂರ್ವವಾದ ಕಲಾ ಕುಂಚದಿಂದ ಚಿತ್ರಕಲೆಯ ಪ್ರದರ್ಶನ ಮಾಡಿದ್ದರು.
ಕಲಾ ಬಗ್ಗೆ ಉತ್ಸವದಲ್ಲಿ ಕಲಾಸಕ್ತÀರಿಗೆ ಚಿತ್ರಕಲೆಯ ಬಗ್ಗೆ ಮಾಹಿತಿ ಮತ್ತು ಕಲೆಗೆ ಸಂಬಂಧಿಸಿದ ಹಲವು ಪ್ರಕಾರ ಬಗ್ಗೆ ನುರಿತ ಕಲಾವಿದರಿಂದ ಮಾಹಿತಿ ನೀಡಲಾಗು ತ್ತಿದೆ. ಕಲಾ ಉತ್ಸವದಲ್ಲಿ ವಿವಿಧ ಕಲಾವಿದರು ರಚಿಸಿರುವ ಚಿತ್ರಕಲೆಗಳು ಕಲಾ ರಸಿಕರನ್ನು ತುದಿಕಾಲ ಮೇಲೆ ನಿಲ್ಲುವಂತೆ ಮಾಡಿದೆ ಕಲಾ ಶಿಬಿರಕ್ಕೆ ಸಾರ್ವಜನಿಕರು ತಂಡೊಪತಂಡ ವಾಗಿ ಆಗಮಿಸಿ ಚಿತ್ರಕಲೆಗಾರರ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ.
ಚಿತ್ರ, ವರದಿ: ರಂಜಿತಾ ಕಾರ್ಯಪ್ಪ, ಕೆ.ಕೆ.ಎಸ್.