ಶ್ರೀಮಂಗಲ, ನ. 19: ಪ್ರವಾದಿ ಹುಟ್ಟುಹಾಕಿದ ಸಿದ್ಧಾಂತದಲ್ಲಿ ಕೊಡಗಿನ ಮುಸ್ಲಿಂ ಬಾಂಧವರಿಗೆ ಗೌರವ ನಂಬಿಕೆ ಇರುವದೇ ನಿಜವಾದಲ್ಲಿ ಟಿಪ್ಪುವಿನ ಜಯಂತಿ ಆಚರಣೆಯನ್ನು ಬಹಿರಂಗವಾಗಿ ವಿರೋಧಿಸಿ ಬಹಿಷ್ಕರಿಸಲಿ, ಆ ಮೂಲಕ ಪ್ರವಾದಿ ಸಿದ್ದಾಂತದ ಮೌಲ್ಯವನ್ನು ಸಮಾಜಕ್ಕೆ ತಿಳಿಸಲಿ ಎಂದು ಯುಕೊ ಸಂಸ್ಥೆಯ ಅಧ್ಯಕ್ಷÀ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಕರೆ ನೀಡಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರವಾದಿಯ ತತ್ವ ಸಿದ್ದಾಂತದ ಇಸ್ಲಾಂನಲ್ಲಿ ಅಸಹನೆ, ಕ್ರೌರ್ಯ, ಭಯೋತ್ಪಾದನೆಗೆ ಅವಕಾಶವಿ¯್ಲ ಎಂದಾದಲ್ಲಿ ಟಿಪ್ಪುವಿನ ಜಯಂತಿ ಆಚರಣೆಯನ್ನು ಇಸ್ಲಾಂ ಹೇಗೆ ಒಪ್ಪಿಕೊಳ್ಳುತ್ತದೆ. ಕೇವಲ ಪ್ರವಾದಿ ಸಿದ್ದಾಂತ ಹಾಗೂ ಟಿಪ್ಪುವಿನ ಕ್ರೌರ್ಯ ಮತ್ತು ಆತನ ಮತಾಂಧತೆಯನ್ನು ತುಲನಾತ್ಮಕವಾಗಿ ಮಾತನಾಡುವದನ್ನೇ ಸಹಿಸಲಾಗದಿರುವಾಗ, ಇನ್ನು ಮೋಸದಿಂದ ಒಂದು ಜನಾಂಗದ ಮಾರಣಹೋಮ ನಡೆಸಿದ ವ್ಯಕ್ತಿಯ ಜನ್ಮದಿನಾಚರಣೆಯನ್ನು ನಾವು ಸಹಿಸಿಕೊಳ್ಳಬೇಕೆನ್ನುವದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಭಾರತದ ಸಂವಿದಾನದ 19(1)ಎ ವಿಧಿಯಂತೆ ಈ ದೇಶದ ಎಲ್ಲಾ ನಾಗರಿಕರಿಗೆ ಯಾವದೇ ವಿಷಯಕ್ಕೆ ಸಬಂಧಿಸಿದಂತೆ ಯಾವದೇ ಮಾಧ್ಯಮದ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾದ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಕೇವಲ 225 ವರ್ಷಗಳ ಹಿಂದೆ, ಕೇವಲ ನಮ್ಮ 5 ತಲೆಮಾರಿನ ಹಿಂದೆ ಕೊಡವ ಜನಾಂಗದ ಮಾರಣ ಹೋಮ ನಡೆಸಿ, ಮತಾಂತರ ನಡೆಸಿ ಜನಾಂಗದ ನಾಶಕ್ಕೆ ಪ್ರಯತ್ನಿಸಿದ ಟಿಪ್ಪುವಿನ ಜಯಂತಿಯನ್ನು ನಮ್ಮದೇ ನೆಲದಲ್ಲಿ ಬಲವಂತವಾಗಿ ಆಚರಿಸಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರವು ಒಂದು ಜನಾಂಗಕ್ಕೆ ಅವಮಾನ ಮಾಡಿದಾಗ ಅದನ್ನು ಪ್ರತಿಭಟಿಸಲೂ ಸಹ ಅವಕಾಶವಿಲ್ಲವೇ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ನಡೆದ ವಿಚಾರ ಸಂಕೀರ್ಣ ಕಾರ್ಯಕ್ರಮವೊಂದರಲ್ಲಿ, 85 ವರ್ಷದ ಹಿರಿಯ ಸಾಹಿತಿ, ಕೊಡವ ಭಾಷಾ ಹಾಗೂ ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣರವರು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಟಿಪ್ಪು ಹಾಗೂ ಈ ನಾಡಿಗೆ ಆತನಿಂದಾದ ಕೆಡುಕುಗಳ ಬಗ್ಗೆ ವಿಚಾರ ಮಂಡನೆ ಮಾಡಿದ್ದಕ್ಕಾಗಿ, ಧರ್ಮವನ್ನು ಅವಹೇಳನ ಮಾಡಿದ ಆರೋಪದಲ್ಲಿ ಮೊಖದ್ದಮ್ಮೆಯನ್ನು ದಾಖಲಿಸಿ ಹಿಂಸಿಸುವದಾದರೆ, ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಒಬ್ಬ ದರೋಡೆಕೋರನಂತೆ ಹಿಂಭಾಲಿಸಿ ಮಧ್ಯರಾತ್ರಿ ಮನೆಯ ಮೇಲೆ ಧಾಳಿ ನಡೆಸಿ ಈ ವ್ಯವಸ್ಥೆ ಬಂಧಿಸುವದಾದರೆ, ಈ ದೇಶದಲ್ಲಿ ಪ್ರಜಾಪ್ರಭುತ್ವ ಬದುಕಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು. ಕೂಡಲೇ ಅಪ್ಪಣ್ಣನವರ ಹೆಸರನ್ನು ಮೊಕದ್ದಮೆಯಿಂದ ಕೈಬಿಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಇತಿಹಾಸದ ವಾಸ್ತವಂಶವನ್ನು ತೆರೆದಿಟ್ಟ ಸಂತೋಷ್ತಮ್ಮಯ್ಯನವರಿಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದ್ದು ಸರ್ಕಾರವು ಈ ಕೂಡಲೇ ಇಂತಹ ಸಮಾಜಘಾತುಕ ಶಕ್ತಿಗಳನ್ನು ಬಂದಿಸಿ ಸಂತೋಷ್ ತಮ್ಮಯ್ಯನವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.
ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಮೇಲೆ ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ಸರ್ಕಾರ ನಡೆದುಕೊಂಡರೆ ಮುಂದಿನ ಕನ್ನಡ ರಾಜ್ಯೋತ್ಸವವನ್ನು ಕೊಡಗಿನಲ್ಲಿ ಕರಾಳ ದಿನವನ್ನಾಗಿ ಆಚರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ, ಕಳ್ಳಿಚಂಡ ರಾಬಿನ್ಸುಬ್ಬಯ್ಯ, ಚೆಪ್ಪುಡಿರ ಸುಜುಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಮಾದೇಟಿರ ತಿಮ್ಮಯ್ಯ, ಅಪ್ಪರಂಡ ವೇಣುಪೊನ್ನಪ್ಪ ಉಪಸ್ಥಿತರಿದ್ದರು.