ಮಡಿಕೇರಿ, ಅ. 3: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 27.66 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ಅಪ್ಪಯ್ಯ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸದಸ್ಯರುಗಳಿಗೆ ಶೇ. 21 ಡಿವಿಡೆಂಡ್ ನೀಡಲಾಗುವದು. ತಿಳಿಸಿದರು.
ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸದಸ್ಯರುಗಳಿಗೆ ಶೇ. 21 ಡಿವಿಡೆಂಡ್ ನೀಡಲಾಗುವದು. ಹಾಗೂ ಕೃಷಿಯೇತರ ಸಾಲ ರೂ. 901.96 ಲಕ್ಷ ನೀಡಿದ್ದು, ವಸೂಲಾತಿ ಪ್ರಗತಿಯಲ್ಲಿದೆ. ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಪಿ.ಎಂ. ಶಿಲ್ಪ, ನಿರ್ದೇಶಕರುಗಳಾದ ಕೆ.ಟಿ. ಬಿದ್ದಪ್ಪ, ಎಂ.ಎಂ. ಪೂಣಚ್ಚ, ಎನ್.ಸಿ. ವಿಶ್ವನಾಥ, ಎ.ಎಸ್. ನಾಚಯ್ಯ, ಬಿ.ಎಸ್. ಪ್ರತಾಪ್, ಎಸ್.ವಿ. ಮಂಜುನಾಥ, ಕೆ.ವೈ. ಅಶ್ವತ್ಥ, ಬಿ.ಪಿ. ದೇವಕಿ, ಪಿ.ಸಿ. ಚಂದ, ವೃತ್ತಿಪರ ನಿರ್ದೇಶಕ ಕೆ.ಎಂ. ಗಣಪತಿ, ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್ ಹಾಗೂ ಕೆಡಿಸಿಸಿ ಬ್ಯಾಂಕಿನ ಹಿರಿಯ ಮೇಲ್ವಿಚಾರಕಿ ಬಿ.ವಿ. ಭಾರತಿ ಹಾಜರಿದ್ದರು.