ಕುಶಾಲನಗರ, ಸೆ. 24: ಕುಶಾಲನಗರ ಕೊಡವ ಸಮಾಜದ ನೂತನ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಂಜಪರವಂಡ ರಘು ನಂಜಪ್ಪ, ಉಪಾಧ್ಯಕ್ಷರಾಗಿ ಐಲಪಂಡ ಮಂದಣ್ಣ, ಖಜಾಂಚಿಯಾಗಿ ಅಲ್ಲಾರಂಡ ಎಸ್.ಚಂಗಪ್ಪ, ಗೌರವ ಕಾರ್ಯದರ್ಶಿಯಾಗಿ ಪುಲಿಯಂಡ ಎಂ. ಚಂಗಪ್ಪ, ಉಪ ಕಾರ್ಯದರ್ಶಿಯಾಗಿ ಗೌಡಂಡ ಗಣೇಶ್ ದೇವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಸಾಲಿನ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಕೊಡವ ಸಮಾಜದಲ್ಲಿ ನಡೆದ ಮಹಾಸಭೆಯಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನಿರ್ದೇಶಕರುಗಳಾಗಿ ಪಚ್ಚಾರಂಡ ಸ್ವಪ್ನ ವೇಣುಗೋಪಾಲ್, ಉಡುವೆರ ಅಶ್ರಿತ್ ಚಿಟ್ಟಿಯಪ್ಪ, ಚೋವಂಡ ಎ. ಅನಿತ, ವಾಟೇರಿರ ಸಾವಿತ್ರಿ ಈರಪ್ಪ, ಬೊಪ್ಪಂಡ ಕನಿಕೆ ಪುಷ್ಪರಾಜು, ಕಂಬೀರಂಡ ಬೊಳ್ಳಮ್ಮ, ಶಿವಚಾಳಿಯಂಡ ಸರೋಜ ಚೀಯಣ್ಣ, ಬಲ್ಯಾಟಂಡ ಎನ್. ಗಣಪತಿ, ಮಾದಪಂಡ ಕೆ. ಸತೀಶ್ ಮಾಚಯ್ಯ, ಪೌಡಿಯಂಡ ಭೀಮಯ್ಯ, ನಾಗಚೆಟ್ಟಿರ ಕ್ಲೇವ್ ಪೊನ್ನಪ್ಪ, ಪಾಲಚಂಡ ಅಚ್ಚಯ್ಯ, ಎಳ್‍ತಂಡ ಕೆ. ರಂಜಿತ್, ಚೊಟ್ಟೆಯಂಡಮಾಡ ಎಂ. ಪೊನ್ನಪ್ಪ, ಪಳಂಗೇಟಿರ ದಿಲೀಪ್ ಸೋಮಣ್ಣ, ಬೊಳ್ಳಚಂಡ ಕೆ. ಮುತ್ತಣ್ಣ, ಕಾಳಿಮಾಡ ದೀಪಕ್, ನೆರೆಯಂಡ ಕೆ ಸೋಮಯ್ಯ, ಕೇಕಡ ರಘು ಪೂವಯ್ಯ, ಕೆ. ಕುಟ್ಟಪ್ಪ ಅವರುಗಳು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.