ಮಡಿಕೇರಿ, ಸೆ. 24: ತಾರಿಕಟ್ಟೆ ಅಂಗನವಾಡಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೋಷಣ ಅಭಿಯಾನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ಪೊನ್ನಮ್ಮ ವಹಿಸಿದ್ದರು.

ಮಾತೃಪೂರ್ಣ, ಮಾತೃವಂದನ ಮತ್ತು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಯಿತು. ವೆಂಕಮ್ಮ ಸ್ವಾಗತಿಸಿ, ವಿನ್ಯಾ ವಂದನಾರ್ಪಣೆ ಮಾಡಿದರು. ಕಾರ್ಯಕರ್ತೆಯರಾದ ಸತ್ಯಭಾಮ, ಮೀನಾಕ್ಷಿ, ಅಶ್ವಿನಿ, ಬೋಜಿ, ಮೀನಾಕುಮಾರಿ, ಸಹಾಯಕಿಯ ರಾದ ಸವಿತ, ವನಿತಾ, ಪ್ರೇಮ, ಶಾಂತಿ, ಬೇಬಿ, ಆರೋಗ್ಯ ಇಲಾಖೆ ಯಿಂದ ಮತ್ತು ಪಂ. ಸದಸ್ಯರು, ಸಾರ್ವಜನಿಕರು ಹಾಜರಿದ್ದರು.