ನಾಪೆÉÇೀಕ್ಲು, ಸೆ. 23: ನಾಪೆÇೀಕ್ಲು ದವಸ ಭಂಡಾರದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಚಾಳಿಯಂಡ ಸುಭಾಶ್ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮದ ಭಾರತೀಯ ಸೇನೆಯಲ್ಲಿ ಕಿರಿಯ ವಯಸ್ಸಿನಲ್ಲಿಯೇ ಉನ್ನತ ಹುದ್ದೆಗೇರಿದ ಶಿವಚಾಳಿಯಂಡ ಗಿರೀಶ್ ಬಿದ್ದಪ್ಪ ಮತ್ತು ರಾಜ್ಯ ಮೀನುಗಾರಿಕೆ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕಲ್ಲೇಂಗಡ ಬಬೀನ್ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು.

ಮಹಾಸಭೆಯಲ್ಲಿ ಕುಲ್ಲೇಟಿರ ಮಾದಪ್ಪ, ದವಸ ಭಂಡಾರದ ನಿರ್ದೇಶಕರಾದ ಕಲ್ಲೇಂಗಡ ಬೋಪಣ್ಣ, ನಾಟೋಳಂಡ ಕಸ್ತೂರಿ, ಶಿವಚಾಳಿಯಂಡ ಸುಬ್ಬಮ್ಮ, ಅರೆಯಡ ಸದಾ ವಿನೋದ್, ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಕಿಶೋರ್ ಬೋಪಣ್ಣ, ಕೊಂಬಂಡ ಕೇಶವ ಇದ್ದರು.