ಗೋಣಿಕೊಪ್ಪ ವರದಿ, ಸೆ. 23 : ಪೊನ್ನಂಪೇಟೆ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಗೌರಿ-ಗಣೇಶ ವಿಸರ್ಜನೋತ್ಸವ ನಡೆಯಿತು.

ಅಲ್ಲಿನ ಬಸವೇಶ್ವರ ದೇವಸ್ಥಾನ, ಕಾರು ನಿಲ್ದಾಣ, ಡೋಬಿ ಕಾಲೋನಿ, ಶಿವ ಕಾಲೋನಿ, ಕೃಷ್ಣ ಕಾಲೋನಿ ಹಾಗೂ ಕಾಟೃಕೊಲ್ಲಿಯ ಸಮಿತಿಗಳು ಪ್ರತಿಷ್ಠಾಪಿಸಿದ್ದ ಮೂರ್ತಿಗಳು ಪ್ರತ್ಯೇಕವಾಗಿ ಪಟ್ಟಣಕ್ಕೆ ಆಗಮಿಸಿದವು. ನಂತರ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಆರ್ಕೆಸ್ಟ್ರಾ ಇಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು. ನಂತರ ಸಮೀಪದ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.