*ಗೋಣಿಕೊಪ್ಪ, ಸೆ. 22: ಕೈಕೇರಿ ಹಿರಣ್ಣ ಕಾಲೋನಿ ವಿಘ್ನೇಶ್ವರ ಯುವಕ ಸಂಘದ ವತಿಯಿಂದ ಗೌರಿಗಣೇಶ ವಿಸರ್ಜನೋತ್ಸವ ತಾ. 23 ರಂದು (ಇಂದು) ರಾತ್ರಿ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಭರತ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಏಳನೇ ವರ್ಷದ ಗೌರಿಗಣೇಶ ಉತ್ಸವ ಮೂರ್ತಿ ವಿಸರ್ಜನೋತ್ಸವ ಅತಿ ಸರಳವಾಗಿ ಆಚರಿಸಲಾಗುವದು. ಆಚರಣೆಗೆ ತಗುಲುವ ವೆಚ್ಚವನ್ನು ಉಳಿಸಿ ಹಣವನ್ನು ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರಿಗೆ ನೀಡುವದಾಗಿ ಹೇಳಿದರು.

ಸಂಜೆ 5 ಗಂಟೆಗೆ ಸಮರೋಪ ಸಮಾರಂಭ ನಡೆಯಲಿದ್ದು ಅಥಿತಿಗಳಾಗಿ ಜಿ.ಪಂ. ಸಾಮಾಜಿಕ ಸಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೊಪಣ್ಣ, ಎ.ಪಿ.ಎಂ.ಸಿ. ಸದಸ್ಯ ಗುಮ್ಮಟ್ಟಿರ ಕಿಲನ್‍ಗಣಪತಿ, ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ, ಹಾತೂರು, ಗ್ರಾ.ಪಂ. ಸದಸ್ಯ ಕುಲ್ಲಚಂಡ ಚಿನ್ನಪ್ಪ, ವರದಿಗಾರ ಜಗದೀಶ್ ಜೋಡುಬೀಟಿ, ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಚಾಲಕ ಚೆಕ್ಕೇರಾ ಮನು ಕಾವೇರಪ್ಪ, ಗೋಣಿಕೊಪ್ಪ ಪೊಲೀಸ್ ಠಾಣಾ ಅಪರಾದ ವಿಭಾಗದ ಸಿಬ್ಬಂದಿ ಮೋಹನ್ ಟಿ.ಕೆ. ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು ಗೋಷ್ಟಿಯಲ್ಲಿ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಹೆಮಂತ್, ಉಪಸ್ಥಿತರಿದ್ದರು.