ಸೋಮವಾರಪೇಟೆ,ಸೆ.20: ಖಾಸಗಿ ಬಸ್ನ ರೇಡಿಯೇಟರ್ ನಿಂದ ಬಿಸಿ ನೀರು ಮತ್ತು ಆಯಿಲ್ ಉಕ್ಕಿದ ಪರಿಣಾಮ ಕ್ಲೀನರ್ನ ಮುಖ ಹಾಗೂ ಕೈ ಭಾಗಕ್ಕೆ ಸುಟ್ಟಗಾಯಗಳಾಗಿರುವ ಘಟನೆ ಇಂದು ಮಧ್ಯಾಹ್ನ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಶನಿವಾರಸಂತೆಯಿಂದ ಸೋಮವಾರಪೇಟೆ ಮಾರ್ಗವಾಗಿ ಗೋಣಿಕೊಪ್ಪಕ್ಕೆ ತೆರಳುತ್ತಿದ್ದ ಎಸ್ಆರ್ಎಂಎಸ್ ಖಾಸಗಿ ಬಸ್ ಇಲ್ಲಿನ ನಿಲ್ದಾಣದಲ್ಲಿ ನಿಲುಗq Éಯಾಗಿತ್ತು. ಈ ಸಂದರ್ಭ ಬಸ್ನ ಮುಂಬದಿಯಿರುವ ರೇಡಿಯೇಟರ್ಗೆ ನೀರು ಹಾಕಲೆಂದು ಕ್ಲೀನರ್, ಮೂರ್ನಾಡು ಗ್ರಾಮದ ಕೋಮಲೇಶ್ ಅವರು ಮುಚ್ಚಳ ತೆಗೆದಾಕ್ಷಣ, ಒಮ್ಮೆಲೆ ಬಿಸಿನೀರು ಮಿಶ್ರಣದ ಆಯಿಲ್ ಉಕ್ಕಿದೆ.
ಪರಿಣಾಮ ಕೋಮಲೇಶ್ ಅವರ ಮುಖದ ಒಂದು ಪಾಶ್ರ್ವ, ಬಲಗೈಗೆ ಸುಟ್ಟ ಗಾಯಗಳಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲಾಗಿದೆ.