ಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಜನತೆಯ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಜನತೆಯ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಹೋಗಿದ್ದಾರೆ. ಆದ್ದರಿಂದ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಜಿಲ್ಲೆಯ ಎಲ್ಲಾ ಜನರ ಸಂಪೂರ್ಣ ಸಾಲ ಮನ್ನಾ ಮಾಡುವಂತಾಗಬೇಕು. ಈ ಸಂಬಂಧ ಪ್ರಸ್ತಾವನೆ ಸಲ್ಲಿಸು ವಂತಾಗಬೇಕು ಎಂದು ಸಲಹೆ ಯಿತ್ತರು. ಈ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಈ ಕುರಿತು ಮಾತನಾಡಿದ ಜಿ.ಪಂ. ಅಧ್ಯಕ್ಷ ಹರೀಶ್ ಅವರು ಪ್ರಕೃತಿ ವಿಕೋಪದಿಂದ ಜಿ.ಪಂ. ವ್ಯಾಪ್ತಿಯಲ್ಲಿ ಮನೆ, ರಸ್ತೆ, ಬೆಳೆ ಹಾನಿ ಹೀಗೆ ಹಲವು ರೀತಿಯಲ್ಲಿ ಅಪಾರ ಪ್ರಮಾಣ ನಷ್ಟ ಉಂಟಾಗಿದ್ದು, ಜಿ.ಪಂ.ಗೆ ರೂ. 300 ಕೋಟಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಸದಸ್ಯೆ ಯಾಲದಾಳು ಪದ್ಮಾವತಿ ಮಾತನಾಡಿ, ಮಕ್ಕಂದೂರು, ಗಾಳಿಬೀಡು, ಮದೆ ಗ್ರಾ.ಪಂ.ಗಳಲ್ಲಿ ಸಂತ್ರಸ್ತರಿಗೆ ಕೇವಲ ರೂ. 3800 ಚೆಕ್ ವಿತರಿಸಲಾಗಿದೆ. ಆದ್ದರಿಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆಯು ವಂತಾಗಬೇಕು ಎಂದು ಮನವಿ ಮಾಡಿದರು.

ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ, ಸಿದ್ದಾಪುರ, ಗುಹ್ಯ ಮತ್ತಿತರ ಭಾಗಗಳಲ್ಲಿ ಕಾವೇರಿ ನದಿ ದಡದಲ್ಲಿ ಹಲವು ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಇವರನ್ನು ಸ್ಥಳಾಂತರ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸೂಕ್ತ ನೆಲೆ ಕಲ್ಪಿಸಬೇಕಿದೆ ಎಂದು ಕೋರಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ನದಿ ದಡದಲ್ಲಿ ವಾಸಿಸುವ ಎಲ್ಲರನ್ನೂ ಸ್ಥಳಾಂತರ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ನದಿ ದಡದಲ್ಲಿ ಯಾರೂ ಸಹ ಮನೆ ಕಟ್ಟದಂತೆ ಎಚ್ಚರಿಕೆ ನೀಡಬೇಕು ಎಂದರು.

ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಪ್ರಕೃತಿ ವಿಕೋಪದಿಂದ ಕೊಡಗಿನ ಜನರು ಇನ್ನೂ ಹೊರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಅದ್ದೂರಿ ದಸರಾ ಆಚರಣೆ ಸೂಕ್ತವೇ? ಈ ಬಗ್ಗೆ ಚರ್ಚೆಗಳು ನಡೆಯುವಂತಾ ಗಬೇಕು ಎಂದು ಸಲಹೆ ಯಿತ್ತರು. ಸರಳ ದಸರಾ ಆಚರಣೆಗೆ ತನ್ನ ಸಹಮತ ಇರುವದಾಗಿ ಅಧ್ಯಕ್ಷ ಹರೀಶ್ ಹೇಳಿದರು.

(ಮೊದಲ ಪುಟದಿಂದ) ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ಇದನ್ನು ಸರಿಪಡಿಸುವಂತಾಗಬೇಕು ಎಂದು ಜಿ.ಪಂ. ಸದಸ್ಯರು ಒತ್ತಾಯಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಮಾತನಾಡಿ, ಪೊನ್ನಂಪೇಟೆ ಕ್ರೀಡಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದ್ದು, ಪೋಷಕರ ಸಭೆ ನಡೆಸಲಾಗಿದ್ದು, ಸ್ಥಳೀಯ ಇಬ್ಬರು ಕ್ರೀಡಾ ತರಬೇತಿದಾರರು ಮತ್ತು ಒಬ್ಬ ನಿಲಯ ಮೇಲ್ವಿಚಾರಕರನ್ನು ನಿಯೋಜಿಸಬೇಕಿದೆ ಎಂದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.

ಸಲಹಾ ಸಮಿತಿ ರಚನೆ ಮಾಡಬೇಕಿದೆ. ಕ್ರೀಡಾ ಶಾಲೆಯ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಅವರುಗಳು ಹೇಳಿದರು.

ಈ ಬಗ್ಗೆ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್ ಅವರು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಪೋಷಕರ ಸಭೆ ಆಹ್ವಾನಿಸಲಾಗುವದು ಎಂದು ಮಾಹಿತಿ ನೀಡಿದರು. ಸದಸ್ಯ ವಿಜು ಸುಬ್ರಮಣಿ ಮಾತನಾಡಿ, ಸ್ಥಳೀಯ ಕ್ರೀಡಾ ತರಬೇತಿದಾರರನ್ನು ನಿಯೋಜಿಸು ವಂತಾಗಬೇಕು ಎಂದು ಸಲಹೆ ಮಾಡಿದರು.

ಒಂದು ವಾರದಿಂದ ನಿಲಯ ಮೇಲ್ವಿಚಾರಕರು ವಿದ್ಯಾರ್ಥಿ ನಿಲಯದಲ್ಲಿ ಇಲ್ಲದೆ ಮಕ್ಕಳು ಹೊಡೆದಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಸರಿತಾ ಪೂಣಚ್ಚ ಮಾತನಾಡಿ, ಪೊನ್ನಂಪೇಟೆ ಕ್ರೀಡಾ ವಸತಿ ನಿಲಯವನ್ನು ಸರಿಪಡಿಸುವ ಕಾರ್ಯ ವಾಗಬೇಕು. ನಿಲಯ ಮೇಲ್ವಿ ಚಾರಕರನ್ನು ತಕ್ಷಣವೇ ನಿಯೋಜಿಸು ವಂತಾಗಬೇಕು. ಆ ನಿಟ್ಟಿನಲ್ಲಿ ಗೌರವ ಧನವನ್ನು ನೀಡಲು ತಾನು ಸಿದ್ಧ ಎಂದು ತಿಳಿಸಿದರು.’

ಜಿಲ್ಲೆಯ ಪೊನ್ನಂಪೇಟೆ, ಗೋಣಿಕೊಪ್ಪ, ಸಿದ್ದಾಪುರ, ನೆಲ್ಲಿಹುದಿಕೇರಿ ಮತ್ತಿತರ ಕಡೆಗಳಲ್ಲಿ ಕಸ ವಿಲೇವಾರಿಗೆ ತುಂಬಾ ತೊಂದರೆ ಯಾಗಿದೆ. ಆದ್ದರಿಂದ ಕಸ ವಿಲೇವಾರಿ ಮಾಡಲು ಸೂಕ್ತ ಸ್ಥಳ ಗುರುತು ಮಾಡಬೇಕು ಎಂದು ಮೂಕೊಂಡ ಶಶಿ ಸುಬ್ರಮಣಿ ಕೋರಿದರು.

ಕೇರಳ ರಾಜ್ಯದಲ್ಲಿಯೂ ಸಹ ಪ್ರಕೃತಿ ವಿಕೋಪ ಉಂಟಾಗಿತ್ತು, ಸಾಂಕ್ರಾಮಿಕ ರೋಗಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಸಲಹೆಯಿತ್ತರು. ಸಿ.ಕೆ. ಬೋಪಣ್ಣ ಮಾತನಾಡಿ, ಗೋಣಿಕೊಪ್ಪದಲ್ಲಿ ಕಸವಿಲೇವಾರಿಗೆ ಜಾಗವಿಲ್ಲ. ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ನುಡಿದರು.

ಸದಸ್ಯ ವಿಜು ಸುಬ್ರಮಣಿ ಮತ್ತು ಸುನಿತಾ ಅವರು ಮಾತನಾಡಿ ಕಸ ವಿಲೇವಾರಿ ಘಟಕ ಸ್ಥಾಪಿಸುವಂತಾU Àಬೇಕು. ಸಿಸಿಟಿವಿ ಅಳವಡಿಸುವಂತಾ ಗಬೇಕು ಎಂದರು.

ಕವಿತಾ ಪ್ರಭಾಕರ್ ಮಾತನಾಡಿ ಭಾಗಮಂಡಲ ಬಳಿಯ ತಣ್ಣಿಮಾನಿ ಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಉದ್ದೇಶಿಸ ಲಾಗಿತ್ತು, ಆದರೆ ಹಲವು ಸಮಸ್ಯೆ ಗಳಿಂದಾಗಿ ಕಸ ವಿಲೇವಾರಿಗೆ ಅವಕಾಶ ಮಾಡುತ್ತಿಲ್ಲ. ಇದರಿಂದ ಆಸ್ಪತ್ರೆ ಬಳಿ ಕಸ ಸುರಿಯುತ್ತಿದ್ದು, ಪರಿಸರ ಅಶುಚಿತ್ವ ಆಗುತ್ತಿದೆ ಎಂದು ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಹಲವು ಕಡೆಗಳಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಜಾಗ ಸಿಗುತ್ತಿಲ್ಲ. ಜಾಗ ಗುರುತು ಮಾಡಿದರೂ ಸಹ ಹಲವು ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದರು.

ಸದಸ್ಯ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಕೊಡವ ಹೆರಿಟೇಜ್ ಕಟ್ಟಡ ಇನ್ನೂ ಸಹ ಪೂರ್ಣಗೊಂಡಿಲ್ಲ. ಆದರೂ ಸಹ ಹಳೇ ಮಾಹಿತಿಯನ್ನೇ ಅನುಪಾಲನಾ ವರದಿಯಲ್ಲಿ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡವ ಹೆರಿಟೇಜ್ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎಷ್ಟು ತಿಂಗಳು ಬೇಕು ಎಂದು ಅವರು ಮಾಹಿತಿ ಕೇಳಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ ಅವರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಟೆಂಡರ್ ದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದ್ದರಿಂದ ಹೊಸ ಏಜೆನ್ಸಿಯಿಂದ ಕಾಮಗಾರಿ ನಿರ್ವಹಿಸಲಾಗುವದು ಎಂದು ಸಭೆಯ ಗಮನಕ್ಕೆ ತಂದರು.

ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅನುಪಾಲನಾ ವರದಿ ನೀಡುವಾಗ ನಿಖರ ಮಾಹಿತಿ ಒದಗಿಸಲಾಗುವದು ಎಂದು ತಿಳಿಸಿದರು.

ಗ್ರಾಮಸಭೆಗೆ ನೋಡೆಲ್ ಅಧಿಕಾರಿಗಳೇ ಹಾಜರಾಗುವದಿಲ್ಲ. ಗ್ರಾಮಸಭೆಗಳು ಗಂಭೀರವಾಗಿ ನಡೆಯುವದಾದರೂ ಹೇಗೆ ಎಂದು ಬಾನಂಡ ಪ್ರಥ್ಯು ಅವರು ಪ್ರಶ್ನಿಸಿದರು. ಗ್ರಾಮಸಭೆಗೆ ನೋಡಲ್ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳು ಬರದಿದ್ದಲ್ಲಿ ತಕ್ಷಣವೇ ತನ್ನ ಗಮನಕ್ಕೆ ತರುವಂತೆ ಜಿ.ಪಂ. ಸಿಇಓ ತಾ.ಪಂ. ಇಒಗಳಿಗೆ ನಿರ್ದೇಶನ ನೀಡಿದರು. ದೀನ್ ದಯಾಳ್ ಉಪಾಧ್ಯಾಯ ಹಾಗೂ ಸೌಭಾಗ್ಯ ಯೋಜನೆಯಡಿ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಇಲಾಖೆ ಇಂಜಿನಿಯರ್‍ಗಳಿಗೆ ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್ ಸೂಚಿಸಿದರು.

ಸದಸ್ಯೆ ಮಂಜುಳಾ ಮಾತನಾಡಿ, ಮದಲಾಪುರ ತೋಟಗಾರಿಕಾ ಇಲಾಖೆಗೆ ಸೇರಿದ 100 ಎಕರೆ ಜಾಗ ಸೀಗೆಹೊಸೂರು ಸನಂ. 13/ಪಿ1ರಲ್ಲಿ 50 ಎಕರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಿದರೆ ನಿರಾಶ್ರಿತರಿಗೆ ನೀಡಬಹುದೆಂದು ಸಲಹೆಯಿತ್ತರು. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ತೋಟಗಾರಿಕಾ ಅಧಿಕಾರಿಗೆ ಜಿ.ಪಂ. ಅಧ್ಯಕ್ಷರು ಸೂಚಿಸಿದರು. ಕರಿಕೆಯಲ್ಲಿ ಎಂ.ಬಿ.ಬಿ.ಎಸ್. ವೈದ್ಯರಿಲ್ಲ ಎಂದು ಸದಸ್ಯೆ ಕವಿತಾ ಪ್ರಭಾಕರ್ ಹೇಳಿದರು. ಕರಿಕೆಗೆ ಬರಲು ವೈದ್ಯರುಗಳು ಒಪ್ಪುತ್ತಿಲ್ಲವೆಂದು ಆರೋಗ್ಯಾಧಿಕಾರಿ ತಿಳಿಸಿದಾಗ ತಾತ್ಕಾಲಿಕವಾಗಿಯಾದರೂ ವೈದ್ಯರನ್ನು ನಿಯೋಜಿಸುವಂತೆ ಕವಿತಾ ಪ್ರಭಾಕರ್ ಮನವಿ ಮಾಡಿದರು.

ಜಿ.ಪಂ. ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸರೋಜಮ್ಮ, ಸದಸ್ಯರಾದ ಎಚ್.ಆರ್. ಶ್ರೀನಿವಾಸ್, ಭವ್ಯ, ಅಚ್ಚಪಂಡ ಮಹೇಶ್, ಸಿ.ಪಿ. ಪುಟ್ಟರಾಜು, ಎಂ.ಬಿ. ಸುನಿತಾ, ಕುಮುದ ಧರ್ಮಪ್ಪ, ಬಿ.ಜೆ. ದೀಪಕ್ ಇತರರು ಹಲವು ವಿಚಾರಗಳ ಕುರಿತು ವಿಷಯ ಪ್ರಸ್ತಾಪಿಸಿ ಗಮನ ಸೆಳೆದರು.