ಕುಶಾಲನಗರ, ಸೆ. 15: ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಪರ್ಸ್‍ನಲ್ಲಿದ್ದ 1 ಲಕ್ಷ ರೂ.ಗಳನ್ನು ಅಪಹರಿಸಿದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಸರಕಾರಿ ಬಸ್‍ನಲ್ಲಿ ಗುಡ್ಡೆಹೊಸೂರು ನಿವಾಸಿ ಎಂ.ಎಂ.ಗಣಪತಿ ಮತ್ತು ಅವರ ಪತ್ನಿ ಚಿಕಿತ್ಸೆಗೆಂದು ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ಪರ್ಸ್‍ನಲ್ಲಿ 40 ಸಾವಿರ ನಗದು ಮನೆಯಿಂದ ತರಲಾಗಿತ್ತು. ಉಳಿದಂತೆ 60 ಸಾವಿರ ಕುಶಾಲನಗರದ ಎಟಿಎಂ ಮೂಲಕ ನಗದೀಕರಿಸಲಾಗಿತ್ತು. ಬಸ್‍ನಲ್ಲಿ ತೆರಳುತ್ತಿದ್ದ ಸಂದರ್ಭ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಸಾಧ್ಯತೆ ಇರುವದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮಾಹಿತಿ ದೊರೆತ ತಕ್ಷಣ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿಗಳ ತಂಡ ಕಳ್ಳರ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.