ಕುಶಾಲನಗರ, ಸೆ. 15: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದಿಂದ ಎರಡನೇ ತಂಡ ಶುಕ್ರವಾರ ಮೈಸೂರಿಗೆ ತೆರಳಿತು. ಶಿಬಿರದ ಆನೆಗಳಾದ ಕಾವೇರಿ, ವಿಜಯ, ಪ್ರಶಾಂತ ಆನೆಗಳನ್ನು ಆನೆಕಾಡು ಶಿಬಿರದಿಂದ ಲಾರಿ ಮೂಲಕ ಮೈಸೂರಿಗೆ ಸಾಗಿಸಲಾಯಿತು ಎಂದು ಉಪ ಅರಣ್ಯ ವಲಯಾಧಿಕಾರಿ ಕನ್ನಂಡ ರಂಜನ್ ತಿಳಿಸಿದ್ದಾರೆ.

ಕಾವೇರಿ ಕಳೆದ 7 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ವಿಜಯ 11 ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದು ಪ್ರಶಾಂತ 12ನೇ ಬಾರಿ ಮೈಸೂರಿನ ದಸರಾಗೆ ತೆರಳುತ್ತಿರುವದಾಗಿ ರಂಜನ್ ತಿಳಿಸಿದ್ದಾರೆ. ಮಾವುತರಾದ ಡೋಬಿ, ಗುಂಡ, ಚಿಣ್ಣಪ್ಪ, ಕವಾಡಿಗರಾದ ಜೆ.ರಂಜನ್, ಭರತ್, ರಾಜು ಮತ್ತು ಕುಟುಂಬ ಸದಸ್ಯರು ಆನೆಗಳೊಂದಿಗೆ ತೆರಳಿದ್ದಾರೆ.