ಮಡಿಕೇರಿ, ಸೆ. 12: ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. 13ರ ಗಣೇಶೋತ್ಸವದಂದು ಸಾಮೂಹಿಕ ಗಣಹೋಮ ಹಾಗೂ ವಿಶೇಷ ಪೂಜೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಹೋಮ ಹಾಗೂ ಪೂಜಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 12 ಗಂಟೆಗೆ ಪ್ರಸಾದ ವಿನಿಯೋಗವಿದೆ. ಅಂದು ದೇವಾಲಯವು ಬೆಳಿಗ್ಗೆ 6.30 ರಿಂದ 1 ಹಾಗೂ ಸಂಜೆ 5 ರಿಂದ 8ರ ತನಕ ತೆರೆದಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.