ಗೋಣಿಕೊಪ್ಪ ವರದಿ, ಸೆ. 11: ಕೆ. ಬಾಡಗ ಗ್ರಾಮ ಸಭೆಯನ್ನು ನೋಡಲ್ ಅಧಿಕಾರಿ ಹಾಗೂ ಇಲಾಖೆಗಳ ಅಧಿಕಾರಿಗಳ ಗೈರಿನಿಂದಾಗಿ ರದ್ದುಪಡಿಸಲಾಯಿತು. ಕೆ. ಬಾಡಗ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಿಗದಿಯಾಗಿದ್ದ ಸಭೆಗೆ ನೋಡಲ್ ಅಧಿಕಾರಿಯಾಗಿ ಪಾಲ್ಗೊಳ್ಳಬೇಕಾಗಿದ್ದ ಅರವಿಂದ್ ಅವರು ಗೈರಾಗಿದ್ದರು. ಕಾದ ನಂತರವೂ ಸಭೆಗೆ ಬಾರದ ಹಿನ್ನೆಲೆಯಲ್ಲಿ ರದ್ದುಪಡಿಸಲಾಯಿತು. ವಿವಿಧ ಇಲಾಖೆಗಳ ಬಹುತೇಕ ಅಧಿಕಾರಿಗಳು ಕೂಡ ಗೈರಾಗಿದ್ದರು. ಇದರಿಂದಾಗಿ ಸಭೆಯನ್ನು ರದ್ದುಪಡಿಸಲಾಯಿತು.