ಸೋಮವಾರಪೇಟೆ, ಸೆ. 8: ಭಾರೀ ಮಳೆಯಿಂದ ಹಾನಿಗೀಡಾದ ಮನೆಯ ಮಾಲೀಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 10 ಸಾವಿರ ನೆರವು ಒದಗಿಸಲಾಯಿತು.
ಸಮೀಪದ ಬಜೆಗುಂಡಿ ಗ್ರಾಮದ ರಾಗಿಣಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿದ್ದು, ಪ್ರಸಕ್ತ ಸಾಲಿನ ಮಹಾಮಳೆಗೆ ಇವರ ವಾಸದ ಮನೆ ಹಾನಿಗೀಡಾಗಿತ್ತು. ಯೋಜನೆಯಿಂದ ಬಿಡುಗಡೆಯಾದ ರೂ. 10 ಸಾವಿರ ಆರ್ಥಿಕ ನೆರವನ್ನು ಯೋಜನಾಧಿಕಾರಿ ವೈ. ಪ್ರಕಾಶ್, ಮೇಲ್ವಿಚಾರಕಿ ರೇವತಿ ಅವರುಗಳು ಫಲಾನುಭವಿಗೆ ವಿತರಿಸಿದರು.