ಕುಶಾಲನಗರ, ಆ. 25: ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಜೀವನದಿ ಕಾವೇರಿಗೆ 84ನೇ ಮಹಾ ಆರತಿ ಕಾರ್ಯಕ್ರಮ ತಾ. 26 ರಂದು (ಇಂದು) ನಡೆಯಲಿದೆ. ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಆರತಿ ಕ್ಷೇತ್ರದಲ್ಲಿ ಸಂಜೆ 5.30 ಕ್ಕೆ ಕಾರ್ಯಕ್ರಮ ನಡೆಯಲಿದೆ.