ಹುಣಸೂರು, ಆ. 24: ಕೊಡಗು ಜಿಲ್ಲೆಯ ಸಂತ್ರಸ್ತರ ನಿಧಿಗೆ ನಗರದ ಸೇತುವೆ ಬಳಿ ಇರುವ ಶ್ರೀ ದೇವಿ ಪ್ರಸಾದ್ ಹೊಟೇಲ್ ಮಾಲೀಕ ಸಂಜೀವ ಶೆಟ್ಟಿ ಅವರು ರೂ. 1 ಲಕ್ಷದ ಚೆಕ್ಕನ್ನು ತಹಶೀಲ್ದಾರ್ ಮೋಹನ್ ಅವರಿಗೆ ನೀಡಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಕುಮಾರ್, ಹೊಟೇಲ್‍ನ ಸಿಬ್ಬಂದಿ ಹಾಗೂ ಸ್ಥಳೀಯರು ಹಾಜರಿದ್ದರು.