ಕೂಡಿಗೆ, ಆ. 22: ಹಾರಂಗಿ ಜಲಾಶಯಕ್ಕೆ ಹೆಚ್ಚು ನೀರು ಬರುತ್ತಿದ್ದು, ಅಣೆಕಟ್ಟೆಯು ಬಿರುಕು ಬಿಟ್ಟು ಒಡೆಯುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆ ಈ ವ್ಯಾಪ್ತಿಯ ಸಾರ್ವಜನಿಕರು ಭಯ ಪಡುವಂತಾಗಿದೆ.

ಹಾರಂಗಿ ಅಣೆಕಟ್ಟೆಯಲ್ಲಿ ಅಂತಹ ಯಾವ ಬಿರುಕುಗಳು ಕಾಣಿಸಿಕೊಂಡಿಲ್ಲ ಹಾಗೂ ಒಡೆಯುವ ಸಂಭವವು ಇಲ್ಲ. ಹಾಗಾಗಿ ಯಾರು ಕೂಡಾ ಭಯಪಡುವ ಅಗತ್ಯವಿಲ್ಲ. ಅಂತಹ ಸುದ್ದಿಗೆ ಯಾರು ಸಹ ಕಿವಿಗೊಡದೆ ಧೈರ್ಯವಾಗಿರಬೇಕೆಂದು ಸಂಬಂಧಿಸಿದ ಅಧಿಕಾರಿಗಳು ತಿಳಿಹೇಳಿದ್ದಾರೆ.