*ಸಿದ್ದಾಪುರ, ಆ. 23: ಪ್ರಕೃತಿ ಎಂಬದು ಅನೇಕ ಕೌತುಕಗಳ ಆಗರ. ನಮ್ಮ ಸುತ್ತಲಿನ ಪರಿಸರ ಅನೇಕ ವಿಸ್ಮಯಗಳನ್ನು ತನ್ನ ಒಡಲಲ್ಲಿರಿಸಿ ಕೊಂಡಿದೆ. ಅನೇಕ ಸಂದರ್ಭ ಗಳಲ್ಲಿ ಪ್ರಕೃತಿ ಮೂಡಿಸುವ ಬೆರಗನ್ನು ನಾವು ನೋಡಬಹುದಾಗಿದೆ. ಅಂತಹದೊಂದು ಬೆರಗು ಅಭ್ಯತ್‍ಮಂಗಲದ ಜ್ಯೋತಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಕಾಣಬಹುದಾಗಿದೆ. ಇಲ್ಲಿ ಜೇಡಗಳು ಮರವೊಂದಕ್ಕೆ ಬಲೆ ಬೀಸುವ ಮೂಲಕ ಅಪ್ಪಿಕೊಂಡಿದ್ದು, ಮಲ್ಲಿಗೆ ಹೂವಿನಿಂದ ಮರವನ್ನು ಶೃಂಗಾರ ಮಾಡಿದಂತೆ ಕಂಡು ಬರುತ್ತಿದೆ. ಮರವನ್ನು ಮಂಜಿನ ಹೊದಿಕೆಯಿಂದ ಹೊದಿಸಿದಂತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

- ಅಂಚೆಮನೆ ಸುಧಿ.