ಮಡಿಕೇರಿ, ಆ. 5: ಮಕ್ಕಳು ತಮ್ಮಲ್ಲಿನ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ‘ಶಕ್ತಿ’ ಸಲಹಾ ಸಂಪಾದಕ ಹಾಗೂ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕರೆ ನೀಡಿದ್ದಾರೆ.
ನಗರದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಸಾಹಿತ್ಯ, ಸಾಂಸ್ಕøತಿಕ ಅಭಿನಂದನಾ ಕಾರ್ಯ ಕ್ರಮವಾದ ಹಿಮವನ ಪ್ರತಿಭಾ ಸಂಗಮ ಉದ್ಘಾಟಿಸಿ ಮಾತನಾಡಿದ ಅನಂತಶಯನ ಅವರು, ಪ್ರತಿಯೊಂದು ಮಗುವಿನಲ್ಲಿಯೂ ಅಪ್ಪಟ ಪ್ರತಿಭೆಯಿರುತ್ತದೆ. ಆದರೆ ಅದನ್ನು ಹೊರಹೊಮ್ಮಿಸುವ ವಿಧಾನ ತಿಳಿದಿರುವದಿಲ್ಲ. ಹೀಗಾಗಿ ಮನದ ಪ್ರತಿಭೆಯನ್ನು ಹೊರತರಲು ಬುದ್ದಿವಂತಿಕೆಯನ್ನು ಬಳಸಿಕೊಳ್ಳ ಬೇಕು. ಪೋಷಕರು, ಶಿಕ್ಷಕರು, ಹಿರಿಯರಿಗೆ ಗೌರವ ನೀಡುವ ಮನೋಭಾವನೆ ಚಿಕ್ಕಂದಿನಲ್ಲಿಯೇ ವ್ಯಕ್ತವಾಗಬೇಕೆಂದು ಅಭಿಪ್ರಾಯ¥ Àಟ್ಟರು.
ಪ್ರತೀ ಕ್ಷಣ ಕೂಡ ಅಮೂಲ್ಯವಾಗಿದ್ದು, ಸ್ಪರ್ಧಾತ್ಮಕ ದಿನಗಳು ಇದಾಗಿರುವದರಿಂದ ಮಕ್ಕಳ ವಿಶೇಷತೆಯ ಗುಣಗಳು ಅನಾವರಣ ಗೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದೂ ಅವರು ಅಭಿಪ್ರಾಯ ಪಟ್ಟರು.
ಕೈ ದೀವಿಗೆ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಸಂಗೀತಾ ರವಿರಾಜ್, ಕನ್ನಡ ಭಾಷಿಕರೇ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕøತಿಯನ್ನು ಪ್ರಜ್ವಲಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ. ಮೊಬೈಲ್, ಟಿ.ವಿ.ಗಳಿಂದ ಮಕ್ಕಳು ಓದುವದಿಲ್ಲ ಎಂಬ ಅಪವಾದ ಮಾಡುವದಕ್ಕಿಂತ ಮನೆಯಲ್ಲಿಯೇ ಮಕ್ಕಳಿಗೆ ಕಿರು ಗ್ರಂಥಾಲಯ, ಪುಸ್ತಕಗಳನ್ನು ವ್ಯವಸ್ಥೆಗೊಳಿಸಿ ಸಾಹಿತ್ಯಾಭಿರುಚಿ ಮೂಡಿಸುವ ಪ್ರಯತ್ನ ಆಗಬೇಕೆಂದು ಕರೆ ನೀಡಿದರು.
ವಿವೇಕಪಥ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಮರ್ಥ ಕನ್ನಡಿಗ ಸಂಸ್ಥೆಯ ಪ್ರಧಾನ ಸಂಚಾಲಕ ಕೆ. ಬಸವರಾಜು, ಸರ್ಕಾರಿ ಶಾಲೆಗಳನ್ನು ರಾಜ್ಯದಲ್ಲಿ ಉಳಿಸುವ ನಿಟ್ಟಿನಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯು ಪ್ರತಿಯೋರ್ವ ಕನ್ನಡಿ ಗನಿಂದಲೂ ತಲಾ 1 ರೂಪಾಯಿ ದೇಣಿಗೆ ಸಂಗ್ರಹಿಸುತ್ತಿದೆ. ಈ ರೀತಿ 6 ಕೋಟಿ ಕನ್ನಡಿಗರಿಂದ ಸಂಗ್ರಹಿತ 6 ಕೋಟಿ ರೂ. ಹಣದಲ್ಲಿ ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗಳ ರಕ್ಷಣೆ ಸಾಧ್ಯ ಎಂದು ಹೇಳಿದರು.
ಗಮಕ ದುಂಧುಬಿ ಪತ್ರಿಕೆಯ ಪ್ರಧಾನ ಸಂಪಾದಕ ಕೃ.ಪಾ. ಮಂಜುನಾಥ್ ಮಾತನಾಡಿ, ಉದಯೋನ್ಮುಖ ಕವಿ, ಸಾಹಿತಿಗಳಿಗೆ ಸಮರ್ಥ ಕನ್ನಡಿಗ ಸಂಸ್ಥೆಯು ಸೂಕ್ತ ವೇದಿಕೆ ಕಲ್ಪಿಸುತ್ತಾ ಸಾಹಿತ್ಯ, ಸಂಸ್ಕøತಿಯ ರಕ್ಷಣೆಗೆ ಮುಂದಾಗಿದೆ ಎಂದರು. ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮೀ ಮಾತನಾಡಿ, ಕೊಡಗಿನಲ್ಲಿ ಸಾಹಿತಿಗಳು, ಕವಿಗಳು, ಬರಹಗಾರರು, ಸಾಂಸ್ಕøತಿಕ ಚಟುವಟಿಕೆಗಳನ್ನು ನಿರತರಾಗಿರು ವವರನ್ನು ಪ್ರೋತ್ಸಾಹಿ ಸಲು ಸಂಸ್ಥೆ ಬದ್ದವಾಗಿದೆ. ಹೊಸಬರಿಗೆ ವೇದಿಕೆಯಲ್ಲಿ ಅವಕಾಶ ನೀಡುತ್ತಾ, ಸುಪ್ತ ಪ್ರತಿಭೆಗಳನ್ನು ಸಾಹಿತ್ಯ ಮತ್ತು ಕಲಾ ಲೋಕಕ್ಕೆ ಪರಿಚಯಿಸಲಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಮೈಸೂರು ಜಿಲ್ಲೆಯ ಪ್ರಧಾನ ಸಂಚಾಲಕ ದೊರೆಸ್ವಾಮಿ ಸಿದ್ದೇಗೌಡ, ಗೌರವ ಸಲಹೆಗಾರ ಲಿಂಗೇಶ್ ಹುಣಸೂರು ವೇದಿಕೆಯಲ್ಲಿದ್ದರು. ಮೌನ ವಿ. ಜಯಕುಮಾರ್ ಭರತನಾಟ್ಯ ಪ್ರದರ್ಶಿಸಿದ ಕಾರ್ಯಕ್ರಮದಲ್ಲಿ ಲವೀನ್ ಲೋಪೇಸ್ ಸ್ವಾಗತಿಸಿ, ಡಾ. ವೀಣಾ ನಿರೂಪಿಸಿ, ದಿಲೀಶ್ ಜಿ.ನಾಯರ್ ವಂದಿಸಿದರು.
ಜಿಲ್ಲೆಯೆಲ್ಲೆಡೆಯಿಂದ ಬಂದಿದ್ದ ವಿದ್ಯಾರ್ಥಿಗಳು ಹಿಮವನ ಪ್ರತಿಭಾ ಸಂಗಮದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.