“ ಬಿಸಿಯೂಟದ ಸಾಮಗ್ರಿ ವಿತರಣೆಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ. ಸಾಮಗ್ರಿ ಪೂರೈಕೆ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಕಳಪೆ ಆಹಾರ ಸಾಮಗ್ರಿಗಳ ವಿತರಣೆಯಿಂದ ಮಕ್ಕಳು ಅಸ್ವಸ್ಥರಾಗಿ ಜೀವ ಹಾನಿ ಸಂಭವಿಸುವ ಸಾಧ್ಯತೆ ಇದೆ. ಅವ್ಯವಹಾರದಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಭಾಗಿಯಾಗಿರುವ ಶಂಕೆ ಇದೆ.”
ಗ್ರಾಮದ ಬಡಕೂಲಿ ಕಾರ್ಮಿಕರ ಹದಿನೆಂಟು ಮಕ್ಕಳು ಇಲ್ಲಿ ಓದುತ್ತಿದ್ದು, ಈ ಶಾಲೆಗೆ ಸರ್ಕಾರದಿಂದ ಪೂರೈಕೆಯಾಗುತ್ತಿರುವ ಧವಸಧಾನ್ಯಗಳು ಕಸಕಡ್ಡಿ ಹುಳಹುಪ್ಪಟೆಗಳಿಂದ ಕೂಡಿ ತೀರ ಕಳಪೆಯಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಕಿರಣ ಈ ಹಿಂದೆ ಹಲವು ಬಾರಿ ಆರೋಪಿಸಿದ್ದರು. ಕಳಪೆ ಧವಸ ಧಾನ್ಯಗಳಿಂದ ತಯಾರಿಸಿ ಅಡುಗೆ ಊಟ ಮಾಡಲು ಯೋಗ್ಯವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಬೇಳೆಕಾಳು ಪರಿಶೀಲಿಸಿ ಹಾಳಾಗಿರುವ ಬಗ್ಗೆ ಶಿಕ್ಷಕರೊಂದಿಗೂ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲ ಶಾಲೆಗೆ ಉದಾರವಾಗಿ ನೀಡಿದ ಟಿ.ವಿ. ಮತ್ತು ಡಿವಿಡಿ ಬಳಕೆಯಾಗದೆ ಮೂಲೆಗುಂಪಾಗಿದೆ ಎಂದು ಅವರು ಪತ್ರಿಕೆಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ದುಗ್ಗಳ ಸದಾನಂದ