*ಸಿದ್ದಾಪುರ, ಜು. 28: ಅಭ್ಯತ್‍ಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ತೀರಾ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿ ಕಾಮಗಾರಿಗೆ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ರೂ. 2.5 ಲಕ್ಷ ಅನುದಾನ ನೀಡಿದ್ದಾರೆ.

ಹಳೆಯ ಕಾಲದ ಶಾಲೆಯ ಮರಮುಟ್ಟುಗಳು ಗೆದ್ದಲು ಹಿಡಿದು ಶಿಕ್ಷಕರು ಮಕ್ಕಳು ಮಳೆಗಾಲದಲ್ಲಿ ಭಯದ ವಾತಾವರಣದಲ್ಲಿ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಗ್ರಾಮ ಪಂಚಾಯಿತಿಯಿಂದ ಅನುದಾನ ಲಭ್ಯವಾಗದ ಹಿನ್ನೆಲೆ ಜಿ.ಪಂ. ಸದಸ್ಯೆ ಸುನಿತಾ ಅವರಿಗೆ ಮನವಿ ನೀಡಿದ ಮೇರೆಗೆ ಶಾಲೆಗೆ ಸುಣ್ಣ ಬಣ್ಣ ಬಳಿಯಲು ಹಾಗೂ ಕಟ್ಟಡದ ದುರಸ್ತಿಗೆ ಅನುದಾನ ನೀಡಿದ್ದಾರೆ.

ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಅಭ್ಯತ್‍ಮಂಗಲ ಶಾಲೆಯ ಕಟ್ಟಡ ದುರಸ್ತಿಗೆ ಜಿ.ಪಂ. ಸದಸ್ಯರು ಅನುದಾನ ನೀಡಲು ಕೋರಿದ್ದರು.