ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಾತ್ಕಾಲಿಕ ಪ್ರವಾಸದ ವೇಳಾಪಟ್ಟಿಯನ್ನು ಅಧಿಕೃತವಾಗಿ ಮುಖ್ಯಮಂತ್ರಿ ಸಚಿವಾಲಯ ಪ್ರಕಟಿಸಿದೆ. ಆ ಪ್ರಕಾರ ತಾ. 19ರಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್‍ನಲ್ಲಿ ಆಗಮಿಸಲಿದ್ದಾರೆ.3 ಗಂಟೆಗೆ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಮಡಿಕೇರಿಗೆ ಮುಖ್ಯಮಂತ್ರಿ ಪ್ರವಾಸ ವೇಳಾಪಟ್ಟಿ(ಮೊದಲ ಪುಟದಿಂದ) ಆಗಮಿಸುವದರೊಂದಿಗೆ ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜಿಲ್ಲಾಮಟ್ಟದ ಸಭೆ ನಡೆಸಲಿದ್ದಾರೆ. ರಾತ್ರಿ ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ತಾ. 20ರಂದು ಬೆಳಗ್ಗಿನ ಜಾವ 5.45ಕ್ಕೆ ಭಾಗಮಂಡಲಕ್ಕೆ ಪ್ರಯಾಣಿಸಲಿದ್ದು, 6.20ಕ್ಕೆ ಶ್ರೀ ಭಗಂಡೇಶ್ವರನ ದರ್ಶನ ಪಡೆಯಲಿದ್ದಾರೆ.6.35ಕ್ಕೆ ತಲಕಾವೇರಿಗೆ ತೆರಳಿ; 6.45ಕ್ಕೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಿದ್ದಾರೆ. 7.30ಕ್ಕೆ ಅಲ್ಲಿಂದ ನಿರ್ಗಮಿಸುದರೊಂದಿಗೆ 9 ಗಂಟೆಗೆ ಕಂಪಲಾಪುರ ಹೆಲಿಪ್ಯಾಡ್‍ಗೆ ತೆರಳಿ ಮೈಸೂರು ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನದೊಂದಿಗೆ ಆ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ.