ಗೋಣಿಕೊಪ್ಪಲು, ಜು. 8: ಭಾರೀ ಮಳೆಯ ಹಿನ್ನೆಲೆ, ಬೇತ್ರಿಯ ಕಳ್ಳಿರ ತಿಮ್ಮಯ್ಯ ಅವರ ಗದ್ದೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಇಂದು ನಡೆಯಬೇಕಿದ್ದ ಕೆಸರು ಗದ್ದೆ ಕಾಲ್ಚೆಂಡು ಪಂದ್ಯಾವಳಿಯನ್ನು ತಾ. 15ಕ್ಕೆ ಮುಂದೂಡಿರುವದಾಗಿ ಎಸ್‍ಇಎಸ್ ಸ್ಫೋಟ್ರ್ಸ್ ಕ್ಲಬ್‍ನ ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಒಟ್ಟು 48 ತಂಡಗಳು ರಾಜ್ಯ ಮಟ್ಟದ ಕೆಸರು ಗದ್ದೆ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ನೂತನ ತಂಡಗಳು ಹೆಸರು ನೋಂದಾವಣೆಗೆ ಅವಕಾಶವನ್ನು ವಿಸ್ತರಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.