ವೀರಾಜಪೇಟೆ, ಜೂ. 20 : ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಕಾವೇರಿ ಯೋಗÀಕೇಂದ್ರದ 19 ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಯೋಗ ದಿನಾಚರಣೆಯನ್ನು ತಾ. 21 ರಂದು (ಇಂದು) ಆಚರಿಸಲಾಗುವದು ಎಂದು ಕೇಂದ್ರದ ಯೋಗ ಗುರು ಸೀತಾರಾಂ ರೈ ತಿಳಿಸಿದ್ದಾರೆ.

ಕಾವೇರಿ ಯೋಗ ಕೇಂದ್ರದ 19 ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜೂ. 21 ರಂದು ಬೆಳಿಗ್ಗೆ 7 ರಿಂದ 8 ವರೆಗೆ ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಕಾವೇರಿ ಆಶ್ರಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾವೇರಿ ಆಶ್ರಮ ವಿವೇಕಾನಂದ ಶರಣು ಸ್ವಾಮೀಜಿ, ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಹೇಮ ಕುಮಾರ್, ಕಾಫಿ ಬೆಳೆಗಾರ ಅನಿಲ್ ರಾವ್ ಹಾಗೂ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.