ಕೂಡಿಗೆ, ಜೂ. 20: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪವಿರುವ ಕಕ್ಕೆಹೊಳೆ ಕಟ್ಟೆಯಿಂದ ನಾಲೆಯ ಮೂಲಕ ಸೀಗೆಹೊಸೂರು, ಬ್ಯಾಡಗೊಟ್ಟ ಗ್ರಾಮಗಳ ಜಮೀನುಗಳಿಗೆ ನೀರು ಹರಿಯುತ್ತದೆ. ಇದೀಗ ಕಕ್ಕೆಹೊಳೆ ಕಟ್ಟೆ ನಾಲೆಯಲ್ಲಿ ಗಿಡ-ಗಂಟಿಗಳು ಬೆಳೆದು ಹಾಳಾಗಿರುವದರಿಂದ ಆ ನಾಲೆಯನ್ನು ದುರಸ್ತಿ ಮಾಡಬೇಕು ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್. ಗಣೇಶ್, ಸೀಗೆಹೊಸೂರು ಗ್ರಾಮಸ್ಥರಾದ ಕುಮಾರ್, ನಾಗರಾಜ್, ದಿನೇಶ್, ವಿಶ್ವನಾಥ್, ಕೃಷ್ಣ ಹಾಗೂ ರೈತರು ಆಗ್ರಹಿಸಿದ್ದಾರೆ.