ಗೋಣಿಕೊಪ್ಪ ವರದಿ, ಜೂ. 5 : ಬೆಸಗೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಹುಲಿ ಧಾಳಿಗೆ ಹಸು ಬಲಿಯಾದ ಪ್ರದೇಶದಲ್ಲಿ ಅರಣ್ಯ ಇಲಾಖೆ ಬೋನ್ ಇಟ್ಟು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದೆ.ಸೋಮವಾರ 12 ಗಂಟೆ ಸುಮಾರಿಗೆ ತಿತಿಮತಿ ಆರ್‍ಆರ್‍ಟಿ ತಂಡ ಹಾಗೂ ಪೊನ್ನಂಪೇಟೆ ಅರಣ್ಯ ಇಲಾಖೆ ವಿಭಾಗದಿಂದ ಬೋನ್ ಇರಿಸಲಾಯಿತು. ಅಲ್ಲಿನ ಮೇಚಮಾಡ ನಟೇಶ್ ಎಂಬವರಿಗೆ ಸೇರಿದ ಹಸು ಭಾನುವಾರ ರಾತ್ರಿ ಕೊಟ್ಟಿಗೆಗೆ ಬಾರದೆ ಹುಡುಕುವಾಗ ಅರಮಣಮಾಡ ಮನು ಎಂಬವರ ಕಾಫಿ ತೋಟದಲ್ಲಿ ಹಸುವಿನ ಶವ ಪತ್ತೆಯಾಗಿತ್ತು. ಈ ಬೆನ್ನಲ್ಲೇ ರಾತ್ರಿಯೇ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಬೋನ್‍ನಲ್ಲಿ ಹಸುವಿನ ದೇಹವನ್ನಿಟ್ಟು ಸೆರೆಗೆ ಮುಂದಾಗಿದೆ.