ಮಡಿಕೇರಿ, ಜೂ. 2: ಚೇರಂಬಾಣೆ ಸಮೀಪದ ಕೋಪಟ್ಟಿ ನಿವಾಸಿ ಚಂದ್ರಶೇಖರ್ ಎಂಬವರು ತಮ್ಮ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ.

ವಿದ್ಯುತ್ ಕಂಬದಿಂದ ಶಾಕ್ ಹೊಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯ ಎದುರಾಗಿದ್ದು, ಸಂಬಂಧಪಟ್ಟ ಮಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಗಾಯಾಳು ಆಗ್ರಹಿಸಿದ್ದಾರೆ.