ಮಡಿಕೇರಿ, ಜೂ. 2: ಕಳೆದ ತಾ. 23ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮೂರ್ನಾಡು ಬಳಿಯ ಹೊಸ್ಕೇರಿಯ ತೋಟವೊಂದರ ಕಾರ್ಮಿಕ ಹೆಚ್.ಸ್. ಮೊಣ್ಣ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯರಾತ್ರಿ ಸಾವನ್ನಪ್ಪಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.