ಮಡಿಕೇರಿ, ಮೇ 28: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಬಂದ್ ದಿನವಾದ ಇಂದು ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದು ಅವರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಸ್ವಯಂ ಪ್ರೇರಿತ ಬಂದ್ ಮಾಡಲು ಕರೆಯಿತ್ತಿದೆ. ಆದರೆ ಸಭಾಪತಿಯಾಗಿದ್ದ ಬೋಪಯ್ಯ ಅವರು ಒತ್ತಡ ಹೇರಿ ವಾಹನ ತಡೆಯಲು ಯತ್ನಿಸಿದ್ದು ಸರಿಯಲ್ಲ. ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡದುದು ಸ್ವಾಗತಾರ್ಹ ಎಂದು ಅರುಣ್ ಮಾಚಯ್ಯ ಅಭಿಪ್ರಾಯಪಟ್ಟಿದ್ದಾರೆ.