ಗೋಣಿಕೊಪ್ಪಲು, ಮೇ 26: ದೇವರಪುರ ಹೆಬ್ಬಾಲೆ ಬೋಡ್ ನಮ್ಮೆ ಸಂದರ್ಭ ಗೋಣಿಕೊಪ್ಪ, ಪಾಲಿಬೆಟ್ಟ ರಸ್ತೆಯಲ್ಲಿ ವೇಷÀಧಾರಿಯಾಗಿ ಸಂಚರಿಸುತಿದ್ದ ಕಾರ್ಮಿಕನಾಗಿರುವ ಮುತ್ತಪ್ಪ ಅಲಿಯಾಸ್ ಮುತ್ತ ಎಂಬಾತನಿಗೆ ಅಪಘಾತವಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ. ಜೀವನ್ಮರಣ ಸ್ಥಿತಿಯಲ್ಲಿ ಕಾರ್ಮಿಕ ನರಳುತ್ತಿದ್ದು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.ಸುದ್ದಿ ತಿಳಿದ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಕಾರ್ಮಿಕನ ಯೋಗಕ್ಷೇಮ ವಿಚಾರಿಸಿದರು. ನಂತರ ಆತನ ಪತ್ನಿ ಕವಿತಾಳಿಗೆ 10 ಸಾವಿರ ವೈಯಕ್ತಿಕ ಧನ ಸಹಾಯ ನೀಡಿದರು. ಆಸ್ಪತ್ರೆ ವೈದ್ಯ ಡಾ. ದಿವಾಕರ್ ಅವರಲ್ಲಿ ಮಾಹಿತಿ ಪಡೆದರು. ವೀರಾಜಪೇಟೆ ಡಿ.ವೈ.ಎಸ್.ಪಿ ನಾಗಪ್ಪರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಂಕೇತ್ ಪೂವಯ್ಯ ಕಾರ್ಮಿಕನಿಗೆ ಡಿಕ್ಕಿ ಪಡಿಸಿದ ವಾಹನ ಚಾಲಕನನ್ನು ಕೂಡಲೇ ಬಂಧಿಸಿ ಕಾರ್ಮಿಕನಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.