ಮಡಿಕೇರಿ, ಮೇ 26: ನಗರದ ದೇಚೂರು ಶ್ರೀ ರಾಮ ವಿದ್ಯಾ ಗಣಪತಿ ದೇವಸ್ಥಾನದ 20ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. 27 ರಂದು ಹೆಚ್.ಆರ್. ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ.ತಾ. 27 ರಂದು ಬೆಳಿಗ್ಗೆ 6 ಗಂಟೆಗೆ ನಗರ ಸಂಕೀರ್ತನೆ, 8.30 ಗಂಟೆಗೆ ನಿರ್ಮಾಲ್ಯ, ಪುಣ್ಯಾಹ ವಾಚನ, 9 ಗಂಟೆಗೆ ದೇವತಾ ಪ್ರಾರ್ಥನೆ, 9.30 ಗಂಟೆಗೆ ಮಹಾಗಣಪತಿ ಮೂರ್ತಿಗೆ ಅಭಿಷೇಕ, 10 ಗಂಟೆಗೆ ಬಯಲು ಆಂಜನೇಯ ಪೂಜೆ, 10.30 ಗಂಟೆಗೆ ಅಷ್ಠದ್ರವ್ಯ ಮಹಾಗಣಪತಿ ಮತ್ತು ನವಗ್ರಹ ಹೋಮ, 11.15 ಕ್ಕೆ ನವಗ್ರಹ ಮತ್ತು ನಾಗಪೂಜೆ, 12.30 ಕ್ಕೆ ಮಹಾಪೂಜೆ, ಮಂಗಳಾರತಿ ಹಾಗೂ 1 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.