ಶನಿವಾರಸಂತೆ, ಏ. 7: ಕೊಡಗು ಜಿಲ್ಲೆ ತುಳುವೆರ ಜನಪದ ಒಕ್ಕೂಟದ ವತಿಯಿಂದ ಪ್ರಥಮ ವರ್ಷದ ಬಿಸು ಪರ್ಬ ಸಂತೋಷ ಕೂಟ ಕಾರ್ಯಕ್ರಮ ತಾ. 17 ರಂದು ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ನಡೆಯಲಿದೆ ಎಂದು ಬಿಸು ಪರ್ಬ ಆಚರಣಾ ಸಮಿತಿಯ ಪ್ರಚಾರ ಸಮಿತಿ ಅಧ್ಯಕ್ಷ ಶನಿವಾರಸಂತೆಯ ಎಸ್.ಎನ್. ರಘು ಇಲ್ಲಿ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಕ್ಕೂಟದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಐತಪ್ಪ ರೈ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷ ಕೇಶವ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಸು ಪರ್ಬದ ಮಹತ್ವದ ಕುರಿತು ಮಂಗಳೂರಿನ ದಯಾನಂದ್ ಕತ್ತಲ್ ಸರ್ ಉಪನ್ಯಾಸ ನೀಡುವರು. ಉಮೇಶ್ ಮಿಜಾರ್ ತಂಡದ ಕಲಾವಿದರಿಂದ ‘ತೆಲಿಕೆದ ಗೊಂಚಿಲ್’ ಎಂಬ ಹಾಸ್ಯ ನಾಟಕದ ತುಣುಕುಗಳ ಪ್ರದರ್ಶನ, ತುಳು ಜನಪದ ಶೈಲಿಯ ವಿವಿಧ ನೃತ್ಯ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಘು ತಿಳಿಸಿದ್ದಾರೆ.