ಶನಿವಾರಸಂತೆ, ಏ. 7: ಸಮೀಪದ ಗೋಪಾಲಪುರ ಗ್ರಾಮ ಬನಶಂಕರಿ ದೇವಸ್ಥಾನ ಸಮಿತಿ ಹಾಗೂ ದೇವಾಂಗ ಸಂಘದ ವತಿಯಿಂದ ಶ್ರೀ ಬನಶಂಕರಿ ಅಮ್ಮನವರ 20ನೇ ವಾರ್ಷಿಕ ಮಹೋತ್ಸವ ತಾ. 10 ಮತ್ತು 11 ರಂದು ನಡೆಯಲಿದೆ. ತಾ. 10 ರಂದು ಬೆಳಿಗ್ಗೆ 8 ಗಂಟೆಗೆ ಮಹಾಗಣಪತಿ ಪೂಜೆ, ಶ್ರೀ ವೀರಭದ್ರೇಶ್ವರ ಪೂಜಾ ಪೂರ್ವಕವಾಗಿ ಅಮ್ಮನವರಿಗೆ ಫಲ ಪಂಚಾಮೃತ ಅಭಿಷೇಕ, ದುರ್ಗಾ ಸೂಕ್ತ, ಶ್ರೀಸೂಕ್ತ, ಅಭಿಷೇಕ, ಅಲಂಕಾರ ಸೇವೆ ಹಾಗೂ ಮಂಗಳಾರತಿ ನಡೆಯುತ್ತದೆ. 10.30 ರಿಂದ ಮಹಾಗಣಪತಿ, ನವಗ್ರಹ ಮೃತ್ಯುಂಜಯ, ದುರ್ಗಾ ವಾಸ್ತು ಪೂಜಾ ಮತ್ತು ಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಂಜೆ 4 ಗಂಟೆÀಗೆ ಬಹುಮಾನ ವಿತರಣೆ ಕಾರ್ಯಕ್ರಮ ವಿರುತ್ತದೆ. ರಾತ್ರಿ 8 ಗಂಟೆಗೆ ಅಮ್ಮನವರಿಗೆ ಮಹಾಪೂಜೆ, ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆ ಇರುತ್ತದೆ. ರಾತ್ರಿ ಸುಗ್ಗಿ ಕುಣಿತ ಮತ್ತು ಪಟಾಕಿ ಪ್ರದರ್ಶನವಿರುತ್ತದೆ. ತಾ 11 ರಂದು ಬೆಳಿಗ್ಗೆ 5.30 ಗಂಟೆಗೆ ಅಮ್ಮನವರನ್ನು ಅಡ್ಡಪಲ್ಲಕ್ಕಿಯಲ್ಲಿ ಗಂಗಾ ಸ್ನಾನಕ್ಕೆ ತರುವದು. ನಂತರ ಪಂಚ ಕಲಶಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಗುವದು. 8 ಗಂಟೆಗೆ ಕೆಂಡಕೊಂಡ ಪ್ರವೇಶ ನಂತರ ಅಮ್ಮನವರಿಗೆ ಪೂಜೆ, ಕುಂಕು ಮಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.