ಕೂಡಿಗೆ, ಏ. 7: ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆಯ ದೃಷ್ಟಿಯಿಂದ ಕೊಡಗಿನ ಗಡಿಭಾಗ ಶಿರಂಗಾಲದಲ್ಲಿರುವ ಅರಣ್ಯ ತಪಾಸಣಾ ಗೇಟ್‍ನಲ್ಲಿ ವಾಹನಗಳ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

ಹಾಸನ ಮತ್ತು ಕೇರಳ ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿಯಾಗಿರುವದರಿಂದ ವಾಹನಗಳ ಸಂಚಾರವು ಹೆಚ್ಚಾಗಿದೆ. ಈಗಾಗಲೇ ಹಾಸನ ಮತ್ತು ಮಂಗಳೂರು ರಾಷ್ಟ್ರ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ವಾಹನಗಳು ಕೊಡಗಿನ ಮೂಲಕ ಶಿರಂಗಾಲದ ಗಡಿಭಾಗದಿಂದ ಹಾಸನ ಮತ್ತು ಶಿವಮೊಗ್ಗದತ್ತ ಚಲಿಸುತ್ತಿದ್ದು, ವಾಹನಗಳನ್ನು ತಪಾಸಣೆ ನಡೆಸುತ್ತಿರುವದು ಕಂಡುಬರುತ್ತಿದೆ. ತಪಾಸಣೆಯಲ್ಲಿ ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ರಾಜಶೇಖರ್, ಶಿಕ್ಷಣ ಇಲಾಖೆಯ ರಾಜಣ್ಣ, ರೈತ ಸಂಪರ್ಕ ಕೇಂದ್ರದ ಪೂಣಚ್ಚ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಡಗಿದ್ದಾರೆ.