*ಗೋಣಿಕೊಪ್ಪಲು, ಏ. 4: ಕೊಡಗು ಹಿಂದೂ ಮಲಯಾಳಿ ಸಂಘ ಹಾಗೂ ಅಮ್ಮತ್ತಿ ಕಾರ್ಮಾಡು ಜೈ ಶ್ರೀರಾಮ್ ಮಲಯಾಳಿ ಸಂಘದ ಆಶ್ರಯದಲ್ಲಿ ತಾ. 6 ರಿಂದ 8ರವರೆಗೆ ನಡೆಯಬೇಕಿದ್ದ ಏಳನೇ ವರ್ಷದ ಜಿಲ್ಲಾ ಮಟ್ಟದ ಕೊಡಗು ಮಲಯಾಳಿ ಕ್ರಿಕೆಟ್ ಪಂದ್ಯಾಟ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದ್ದು, ತಾ. 20 ರಿಂದ 22ರವರೆಗೆ ನಡೆಯಲಿದೆ ಎಂದು ಕ್ರೀಡಾ ಸಂಚಾಲಕ ಲಿಜೇಶ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೋಂದಾಯಿತ ತಂಡಗಳು ಈ ಬದಲಾವಣೆಗೆ ಸಹಕರಿಸಬೇಕು ಎಂದು ಕೋರಿದ್ದಾರೆ.

ಸಂಘಟನಾ ಕಾರ್ಯದರ್ಶಿ ರತೀಶ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ 9741917874, 9686831055 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.