ನಾಪೆÇೀಕ್ಲು, ಏ. 1: ಮೈಸೂರು ಜಿಲ್ಲೆಯ ಹುಣಸೂರು ಬಳಿ ಮಾರುತಿ ಓಮ್ನಿ ಮತ್ತು ಸರ್ಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ನಾಪೆÇೀಕ್ಲು ಕಲ್ಲುಮೊಟ್ಟೆ ನಿವಾಸಿ ಕನ್ನಾಡಿಯಂಡ ಅಬ್ದುಲ್ ಹಮೀದ್ (36) ಸ್ಥಳದಲ್ಲೇ ಮೃತಪಟ್ಟಿರುವದಾಗಿ ವರದಿಯಾಗಿದೆ.ಅಬ್ದುಲ್ ಹಮೀದ್ ತನ್ನ ನೆರೆಮನೆಯ ದಾವುದ್ ಮತ್ತು ತನ್ನ 10 ವರ್ಷ ಪ್ರಾಯದ ಪುತ್ರ ಅಜನಾಸ್‍ನೊಂದಿಗೆ ಮೈಸೂರು ನಾರಾಯಣ ಹೃದಯಾಲಯದಲ್ಲಿ ಹೃದಯ ಚಿಕಿತ್ಸೆಗೆ ದಾಖಲಾಗಿದ್ದ ತನ್ನ ತಂದೆ ಮೂಸೆ ಅವರನ್ನು ಕಾಣಲು ತನ್ನ ಮಾರುತಿ ಓಮ್ನಿ (ಕೆ.ಎ. 12ಪಿ 9954) ಕಾರಿನಲ್ಲಿ ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ಕಾರು ಹುಣಸೂರು ಬಳಿ ಎದುರಿನಿಂದ ವೇಗವಾಗಿ ಬಂದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಡಿಕ್ಕಿಯಾದ ಪರಿಣಾಮ ಹಮೀದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಪುತ್ರ ಅಜನಾಸ್‍ಗೆ ತೀವ್ರ ತರಹದ ಗಾಯಗಳಾಗಿದ್ದು, ಆತನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಓಮ್ನಿ ಚಲಾಯಿಸುತ್ತಿದ್ದ ದಾವುದ್‍ನ ಎರಡು ಕಾಲುಗಳು ಜಖಂಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿರುವದಾಗಿ ತಿಳಿದು ಬಂದಿದೆ. ಮೃತ ಹಮೀದ್ ಕಲ್ಲುಮೊಟ್ಟೆಯಲ್ಲಿ ದಿನಸಿ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ, ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಈ ಬಗ್ಗೆ ಹುಣಸೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಅಂತ್ಯಕ್ರಿಯೆ ಭಾನುವಾರ ರಾತ್ರಿ ಸ್ವಗ್ರಾಮದಲ್ಲಿ ನಡೆಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. -ಪಿ.ವಿ.ಪ್ರಭಾಕರ್