ಮಡಿಕೇರಿ, ಮಾ. 29: ಕಳೆದ ತಾ. 22 ರಂದು ಬೈಕ್ ಅವಘಡದಲ್ಲಿ ದುರ್ಮರಣಕ್ಕೀಡಾದ ಗುಡ್ಡೆಮನೆ ಚಂದ್ರಶೇಖರ್ ಹಾಗೂ ರೋಹಿಣಿ ಅವರ ಪುತ್ರ ಯೋಗೇಶ್ ಎಂಬಾತನ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದೆ. ಮಗನ ಕಣ್ಣು ಇನ್ನೆರಡು ಜೀವಗಳಿಗೆ ಬೆಳಕಾಗಲಿ ಎಂಬ ಮಾನವೀಯತೆ ನೆಲೆಯಲ್ಲಿ ಕುಟುಂಬದವರು ಆತನ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಜಿಲ್ಲಾಸ್ಪತ್ರೆಯ ವೈದ್ಯರು ಕಣ್ಣುಗಳನ್ನು ಪಡೆದುಕೊಂಡಿರುವದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.