ಕುಶಾಲನಗರ, ಮಾ. 29: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರ ವಲಯದಿಂದ ಸುಮಾರು 33 ಸದಸ್ಯರುಗಳಿಗೆ ಸೋಲಾರ್ ಲೈಟ್ ಅಳವಡಿಕೆಯ ಯೋಜನೆಯ ಅನುದಾನವಾಗಿ 22 ಸಾವಿರ ರೂಪಾಯಿಗಳನ್ನು ವಿತರಿಸಲಾಯಿತು. ಮಾದಾಪಟ್ಟಣ ಕಾರ್ಯ ಕ್ಷೇತ್ರದ ಒಕ್ಕೂಟದ ಸದಸ್ಯೆಗೆ ಅನುದಾನ ವಿತರಣೆ ಸಂದರ್ಭ ಕುಶಾಲನಗರ ವಲಯ ಮೇಲ್ವಿಚಾರಕರಾದ ಹರೀಶ್ ಕೆ. ಸೇವಾಪ್ರತಿನಿಧಿ ಚಂದ್ರಾವತಿ ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.