ಮಡಿಕೇರಿ, ಮಾ. 27: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ಉದ್ಘಾಟನಾ ಸಮಾರಂಭ ಕೊಡಗು ಗೌಡ ಸಮಾಜದ ಆವರಣದಲ್ಲಿ ಕೊಂಬನ ಪ್ರವೀಣ್ ಅವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೊಡಗು ಗೌಡ ಯುವ ವೇದಿಕೆಯ ಲಾಂಛನ ಹಾಗೂ ನೋಂದಣಿ ಪತ್ರ ಮತ್ತು ವೆಬ್‍ಸೈಟನ್ನು ಅತಿಥಿಗಳು ಅನಾವರಣಗೊಳಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಅಮೆ ಸೀತಾರಾಂ, ಉಪಾಧ್ಯಕ್ಷ ಕೇಕಡ ನಾಣಯ್ಯ, ಪ್ರಧಾನ ಕಾರ್ಯದರ್ಶಿ ಚೊಕ್ಕಾಡಿರ ಅಪ್ಪಯ್ಯ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಪಂಜಿಪಳ್ಳ ಯತೀಶ್, ಮೈಸೂರಿನ ಅಧ್ಯಕ್ಷ ಪುನೀತ್ ಮುಕ್ಕಾಟಿ, ಕುದುಕುಳಿ ಮಿಲನ ಭರತ್, ಕೊಡಗು ಗೌಡ ಸಮಾಜದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುದುಪಜೆ ಜಾನಕಿ, ಕೊಡಗು ಗೌಡ ಯುವವೇದಿಕೆ ಬೆಂಗಳೂರು ಉಪಾಧ್ಯಕ್ಷ ನಾಟೋಳನ ಸಾಹಿತ್ಯ ಸುಜಯ್ ಭಾಗವಹಿಸಿದ್ದರು.

ಉದ್ಘಾಟನೆ ಅಂಗವಾಗಿ ಏರ್ಪಡಿಸಲಾಗಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಡಿಕೇರಿಯ ಕೊಡಗು ಗೌಡ ಯುವ ವೇದಿಕೆ ತಂಡ ಜಯಗಳಿಸಿದ್ದಾರೆ. ಬೆಂಗಳೂರು ತಂಡ ದ್ವಿತೀಯ ಸ್ಥಾನಗಳಿಸಿತು. ಇದೇ ಸಂದರ್ಭ ಮಹಿಳೆಯರು, ಮಕ್ಕಳಿಗಾಗಿ ಮನರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.