ಸಿದ್ದಾಪುರ, ಮಾ. 27: ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಸಿದ್ದಾಪುರ ಸಮೀಪದ ಅಭ್ಯತ್‍ಮಂಗಲದಲ್ಲಿ ನಡೆದಿದೆ. ಸಿದ್ದಾಪುರದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಹೊಸಕೋಟೆ ನಿವಾಸಿ ಶೌಕತ್‍ಆಲಿ ಎಂಬವರ ಕಾರು ಅಭ್ಯತ್‍ಮಂಗಲ ಗ್ರಾಮದ ಜ್ಯೋತಿನಗರದ ನಿವಾಸಿ ಕೆ.ಎಂ ಬಶೀರ್ ಎಂಬವರ ಬೈಕ್‍ಗೆ ಅತ್ತಿಮಂಗಲ ಕೆರೆಯ ಬಳಿ ಡಿಕ್ಕಿ ಹೊಡೆದಿದ್ದು, ಬಶೀರ್‍ನ ಬಲಗಾಲಿನ ಮೂಳೆ ಮುರಿದಿದೆ. ಗಂಭೀರ ಗಾಯಗೊಂಡ ಬಶೀರ್‍ನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಎ.ಎನ್ ವಾಸು