ಶ್ರೀಮಂಗಲ: ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ಚೀಪೆಕೊಲ್ಲಿ ಗಿರಿಜನ ಕಾಲೋನಿಗೆ ರೂ. 30 ಲಕ್ಷ ವೆಚ್ಚದಲ್ಲಿ ಟಿ.ಎಸ್.ಪಿ ಅನುದಾನದಲ್ಲಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆಯನ್ನು ತಾ. 26 ರಂದು ಜಿ.ಪಂ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅವರು ಉದ್ಘಾಟಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಪೆಮ್ಮಂಡ ರಾಜ ಕುಶಾಲಪ್ಪ, ಸದಸ್ಯರಾದ ಚೊಟ್ಟೆಯಂಡಮಾಡ ಉದಯ, ಶ್ರೀಮಂಗಲ ವಲಯ ಕಾಂಗ್ರೆಸ್ ಅಧ್ಯಕ್ಷ ಕುಂಞಂಗಡ ಬೋಸ್ ಮಾದಪ್ಪ, ಪ್ರಮುಖರಾದ ಕಾಳಿಮಾಡ ಪ್ರಶಾಂತ್, ಮಚ್ಚಮಾಡ ಸಜನ್, ಚೋನಿರ ಹರೀಣ್, ಅಭಿನ್, ಕರ್ತಮಾಡ ಚಿಟ್ಟ, ಕೋಟ್ರಮಾಡ ರಂಜಿ, ಮತ್ತಿತರರು ಹಾಜರಿದ್ದರು.