ಮಡಿಕೇರಿ: ಬಿಜೆಪಿಯ ಹಾಲಿ ಶಾಸಕರುಗಳು ಯಾವದೇ ಜಾತಿ ಜನಾಂಗದ ಅಡಿಯಲ್ಲಿ ಕೆಲಸ ಮಾಡದೆ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದು, ಈ ಬಾರಿಯೂ ರಂಜನ್ ಹಾಗೂ ಬೋಪಯ್ಯ ಅವರಿಗೆ ಪಕ್ಷದ ಟಿಕೆಟ್ ನೀಡಬೇಕೆಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕೊಕ್ಕಲೇರ ಅಯ್ಯಪ್ಪ ಒತ್ತಾಯಿಸಿದ್ದಾರೆ. ಇವರುಗಳಿಗೆ ಟಿಕೆಟ್ ನೀಡದಿದ್ದಲ್ಲಿ ತಾನು ಹಾಗೂ ಬೆಂಬಲಿಗರು ರಾಜೀನಾಮೆ ನೀಡಿ, ಚುನಾವಣೆಯಲ್ಲಿ ತಟಸ್ಥರಾಗುವದಾಗಿ ಅವರು ಹೇಳಿದ್ದಾರೆ.